ಹೊತ್ತಿ ಉರಿದ ಖಾಸಗಿ ಬಸ್: 8 ಮಂದಿ ಸಜೀವ ದಹನ

Prasthutha|

ಕಲಬುರಗಿ: ಜಿಲ್ಲೆಯ ಕಮಲಾಪುರ ಹೊರವಲಯದಲ್ಲಿ ಖಾಸಗಿ ಬಸ್ ಹೊತ್ತಿ ಉರಿದ ಪರಿಣಾಮ 8 ಮಂದಿ ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.

- Advertisement -

ಗೋವಾದಿಂದ ಖಾಸಗಿ ಬಸ್ ಹೈದ್ರಾಬಾದ್​ ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಸಜೀವ ದಹನದ ಬಗ್ಗೆ , ಬೆಂಕಿ ಸಂಪೂರ್ಣ ನಂದಿದ ನಂತರ ಮಾಹಿತಿ ಗೊತ್ತಾಗಲಿದೆ.

ಗಾಯಗೊಂಡಿದ್ದ ಹನ್ನೆರಡು ಮಂದಿಯ ರಕ್ಷಣೆ ಮಾಡಲಾಗಿದೆ. ದುರಂತಕ್ಕೀಡಾದ ಬಸ್​ ನಲ್ಲಿ 35 ಜನ ಪ್ರಯಾಣಿಸುತ್ತಿದ್ದು, 12 ಜನರಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Join Whatsapp