ಸಾಂತ್ವನ ಹೇಳಲು ಬಂದ ಯು.ಟಿ ಖಾದರ್‌ ಭೇಟಿಯನ್ನು ನಿರಾಕರಿಸಿದ ಪ್ರವೀಣ್‌ ನೆಟ್ಟಾರು ಕುಟುಂಬ

Prasthutha|

- Advertisement -

ಬೆಳ್ಳಾರೆ: ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ನೆಟ್ಟಾರುವರೆಗೆ ಶುಕ್ರವಾರ ಸಂಜೆ ಬಂದಿದ್ದ ವಿಧಾನಸಭೆಯ ವಿರೋಧಪಕ್ಷದ ಉಪ ನಾಯಕ ಯು.ಟಿ.ಖಾದರ್‌ ಅವರನ್ನು ಭೇಟಿ ಆಗಲು ಕುಟುಂಬದವರು ನಿರಾಕರಿಸಿದರು. ಪ್ರವೀಣ್‌ ಕುಟುಂಬದವರ ಭೇಟಿ ಸಾಧ್ಯವಾಗದೇ ಅವರು ನೆಟ್ಟಾರು ವೃತ್ತದ ಬಳಿಯಿಂದಲೇ ನಿರ್ಗಮಿಸಿದರು.

’ಮೂರು ದಿನಗಳಿಂದ ಮನೆಗೆ ಸತತವಾಗಿ ಮುಖಂಡರು ಅಭಿಮಾನಿಗಳು ಭೇಟಿ ನೀಡುತ್ತಿರುವುದರಿಂದ ಪ್ರವೀಣ್‌ ಕುಟುಂಬದವರಿಗೆ ವಿಶ್ರಾಂತಿಗೆಸಮಯವೇ ಇಲ್ಲದ ಸ್ಥಿತಿ ಎದುರಾಗಿದೆ. ಪ್ರವೀಣ್ ಅವರ ಹತ್ತಿರದ ಬಂಧುಗಳು ವಿಶ್ರಾಂತಿಯಲ್ಲಿರುವುದರಿಂದ ಭೇಟಿಯಾಗಲು ನಿರಾಕರಿಸಿದ್ದಾರೆ ಎಂಬ ಕಾರಣ ನೀಡಿದ್ದಾರೆ.

- Advertisement -

ಪ್ರವೀಣ್‌ ಕುಟುಂಬದವರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾನು ನೆಟ್ಟಾರು ವೃತ್ತದ ಬಳಿಯಿಂದಲೇ ನಿರ್ಗಮಿಸಿದೆ’ ಎಂದು ಯು.ಟಿ.ಖಾದರ್‌ ತಿಳಿಸಿದರು.ವಾರದ ಹಿಂದೆ ಕೊಲೆಯಾದ ಕಳಂಜದ ಮಸೂದ್‌ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ’ ಎಂದರು.

Join Whatsapp