ಪ್ರವೀಣ್‌ ನೆಟ್ಟಾರು ಕೊಲೆ ಆರೋಪಿಗಳನ್ನು ಪೊಲೀಸರಿಂದ ಎನ್‌ಕೌಂಟರ್ ಮಾಡಿಸುತ್ತೇವೆ: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

Prasthutha|

- Advertisement -

ಶಿವಮೊಗ್ಗ: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಪೊಲೀಸರು ಈಗ ಮಾಡಿದ್ರೆ 2 ಎನ್‌ಕೌಂಟರ್, 5 ವರ್ಷದ ಬಳಿಕ ಮಾಡಿದ್ರೆ 1,100 ಎನ್‌ಕೌಂಟರ್ ಅದನ್ನೂ ನಿಮ್ಮ ಕೈಯಲ್ಲೇ ಮಾಡಿಸುತ್ತೇವೆ ಎಂದು ಸಂಘಪರಿವಾರದ ಮುಖಂಡ ಯಾದವಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.

ಪ್ರವೀಣ್ ನೆಟ್ಟಾರು ಹತ್ಯೆ ವಿರೋಧಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ನಗರದ ಗೋಪಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಯಾದವಕೃಷ್ಣ, ಇನ್ನೂ ನಾವು ಬಿಜೆಪಿ ನಾಯಕರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಅದನ್ನು ಅವರು ಉಳಿಸಿಕೊಳ್ಳಬೇಕು. ಪೊಲೀಸರು ಈಗ ಎನ್‌ಕೌಂಟರ್ ಮಾಡಿದ್ರೆ 2, 5 ವರ್ಷದ ಬಳಿಕ ಎನ್‌ಕೌಂಟರ್ ಮಾಡಿದರೆ 1,100 ಮಾಡಬೇಕಾಗುತ್ತದೆ. ಅದನ್ನೂ ನಿಮ್ಮ ಕೈಯಲ್ಲೇ ಮಾಡಿಸುತ್ತೇವೆ. ಈಗಲೇ 2 ಮಾಡಿ ಮುಗಿಸಿಬಿಡಿ ಎಂಬ ಹೇಳಿಕೆ ನೀಡಿದ್ದಾನೆ.

- Advertisement -

ಭಾರತದ ಮುಸ್ಲಿಮರು ಒಂದು ಕ್ಷಣ ಯೋಚಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಮುಸ್ಲಿಂ ಮುಖಂಡರು ತಮ್ಮ ಸಮಾಜದಲ್ಲಿರುವ ಕೆಟ್ಟವರಿಗೆ ಬುದ್ಧಿ ಹೇಳಿ ತಿದ್ದಬೇಕು. ಅವರು ಹೆಬ್ಬಾವನ್ನು ಸಾಕುತ್ತಿದ್ದಾರೆ. ಕೊನೆಗೊಂದು ದಿನ ಹೆಬ್ಬಾವೇ ಅವರನ್ನು ನುಂಗುತ್ತದೆ, ಅದಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎಂದ್ದಿದ್ದಾನೆ.

Join Whatsapp