ರಾಜಕಾರಣಿ ಎಂದರೆ ಜನರ ಮೇಲೆ ಕಾರು ಹರಿಸುವುದಲ್ಲ: ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ

Prasthutha|

ಲಖನೌ: ರಾಜಕಾರಣಿ ಎಂದರೆ ಜನರ ಮೇಲೆ ಕಾರು ಹರಿಸುವುದಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.

- Advertisement -


ಬಿಜೆಪಿ ಅಲ್ಪಸಂಖ್ಯಾತ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ ಎಂದರೆ ನಿಮ್ಮ ಸಮಾಜ ಮತ್ತು ನಿಮ್ಮ ರಾಷ್ಟ್ರದ ಸೇವೆ. ಇದರಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಸಂಬಂಧವಿಲ್ಲ. ರಾಜಕೀಯ ನಾಯಕರಾಗಿರುವುದು ಎಂದರೆ ಲೂಟಿ ಮಾಡುವುದಲ್ಲ. ಕಾರು ಯಾರ ಮೇಲಾದರೂ ಹರಿಸುವುದಲ್ಲ. ಬಡವರ ಸೇವೆಗಾಗಿ ನಾವು ಈ ಪಕ್ಷದಲ್ಲಿದ್ದೇವೆ,’ ಎಂದು ಹೇಳಿದರು.

ರೈತರ ಮೇಲೆ ಹರಿದ ಎಸ್‌ಯುವಿಯನ್ನು ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಚಲಾಯಿಸುತ್ತಿದ್ದರು. ಇದೇ ವಿಚಾರವಾಗಿ ಅವರು ಮಾತನಾಡಿದ್ದಾರೆ.

Join Whatsapp