ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ ಮುಝಿಬ್ ರಶೀದ್: ವ್ಯಾಪಕ ಶ್ಲಾಘನೆ

Prasthutha|

ತೆಲಂಗಾಣ:  ಪೊಲೀಸ್ ಅಧಿಕಾರಿಯೊಬ್ಬರು ನೀರಿನ ಸುಳಿಗೆ ಸಿಲುಕಿದ್ದ ನಾಯಿಯನ್ನು ತನ್ನ ಪ್ರಾಣ ಒತ್ತೆಯಿಟ್ಟು ರಕ್ಷಸಿದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

- Advertisement -

ನಾಯಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಯನ್ನು ಮುಝಿಬ್ ರಶೀದ್ ಎಂದು ಗುರುತಿಸಲಾಗಿದೆ. ಇವರು ತೆಲಂಗಾಣ ರಾಜ್ಯ ಪೊಲೀಸ್ ಅಧಿಕಾರಿಯಾಗಿದ್ದಾರೆ.

ವೀಡಿಯೋದಲ್ಲಿ ಜೋರಾಗಿ ನೀರು ಹರಿಯುತ್ತಿದ್ದ ಪಕ್ಕದಲ್ಲಿ ನಾಯಿಯೊಂದು ಹೆದರಿಕೊಂಡು ಕುಳಿತಿರವುದನ್ನು ಕಾಣಬಹುದು. ನಂತರ ಹೆದರಿದ ನಾಯಿಯಯನ್ನು ನೋಡಿ ಜೆಸಿಬಿಯ ಮೂಲಕ ಅಲ್ಲಿಗೆ ತೆರಳಿ ಪೊಲೀಸ್ ಅಧಿಕಾರಿಯೊಬ್ಬರು ನಾಯಿಯನ್ನು  ರಕ್ಷಿಸಿದ್ದಾರೆ.

- Advertisement -

ವೀಡಿಯೋವನ್ನು ಹಂಚಿಕೊಂಡ ಐಪಿಎಸ್ ಅಧಿಕಾರಿ, ನೀರಿನ ಸುಳಿಯನ್ನು ನೋಡಿ ಹೆದರಿ ಕುಳಿತ ನಾಯಿಯನ್ನು ರಕ್ಷಿಸಿದ ನಮ್ಮ ಅಧಿಕಾರಿ ಸ್ವತಃ ಜೆಸಿಬಿಯನ್ನು ಕರೆಸಿ ಪ್ರಾಣಿಯನ್ನು ರಕ್ಷಿಸಿದ್ದಾರೆ. ಅವರ ಪ್ರಾಣವನ್ನು ಲೆಕ್ಕಿಸದೆ ನಾಯಿಯನ್ನು ರಕ್ಷಿಸಿದ ಅವರ ದೈರ್ಯಕ್ಕೆ ನನ್ನ ಸಲಾಂ ಎಂದು ಕ್ಯಾಪ್ಷನ್ ನೀಡಿದ್ದಾರೆ.

Join Whatsapp