ಕಳ್ಳರ ATM ಕದ್ದ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು

Prasthutha|

ಹೈದರಾಬಾದ್ : ಕಳ್ಳತನ ಆರೋಪದಲ್ಲಿ ಬಂಧಿತ ಆರೋಪಿಗಳ ಎಟಿಎಂ ಕದ್ದ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

- Advertisement -

ಎಲ್.ಬಿ ನಗರ ಕೇಂದ್ರ ಅಪರಾಧ ಠಾಣೆಯ ಇನ್ಸ್ ಪೆಕ್ಟರ್ ಎಸ್.ದೇವೇಂದರ್ ಅಮಾನತುಗೊಂಡವರು.

ಫೆಬ್ರವರಿಯಲ್ಲಿ ಅಂತಾರಾಜ್ಯ ಟಯರ್ ಕಳ್ಳರನ್ನು ಬಂಧಿಸಿದ್ದಕ್ಕಾಗಿ ಪೊಲೀಸ್ ಆಯುಕ್ತ ಭಾಗವತ್ ಅವರಿಂದ ಪ್ರಶಂಸಿಸಲ್ಪಟ್ಟ 12 ಅಧಿಕಾರಿಗಳಲ್ಲಿ  ದೇವೇಂದರ್ ಕೂಡ ಒಬ್ಬರಾಗಿದ್ದರು. ದೇವೆಂದರ್ ಕಳ್ಳರ ಆಸ್ತಿಯನ್ನು ವಶಪಡಿಸಿಕೊಳ್ಳುವಾಗ ಅವರ ATM ಮತ್ತು ದಾಖಲೆಗಳನ್ನು ಸ್ಟೇಷನಿನಲ್ಲಿ ಠೇವಣಿ ಇರಿಸದೆ ತನ್ನ ವಶದಲ್ಲಿಯೇ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

ಅದೂ ಅಲ್ಲದೆ ವಿವಿಧ ಸ್ಥಳಗಳಿಂದ  ಆ ಎಟಿಎಂಗಳ ಮೂಲಕ  5.5 ಲಕ್ಷ ರೂ.ಮೌಲ್ಯದ ಡೆಬಿಟ್ ಗಳನ್ನು ನಡೆಸಲಾಗಿದೆ ಎಂದು ವರದಿಯಾಗಿದೆ. ಇಡೀ ಘಟನೆಯಲ್ಲಿ ಅಧಿಕಾರಿಯ ಮಹಿಳಾ ಸ್ನೇಹಿತೆಯ ಪಾತ್ರ ಇರುವ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ.

Join Whatsapp