ಜೆಜೆ ನಗರದ ಚಂದ್ರು ಕೊಲೆ ಪ್ರಕರಣ: ಪೊಲೀಸರೇ ಗೃಹಸಚಿವರಿಂದ ಸುಳ್ಳು ಹೇಳಿಸಿದ್ದಾರೆಂದ ಸಿಟಿ ರವಿ !

Prasthutha|

ಬೆಂಗಳೂರು: ಕಳೆದ ಮಂಗಳವಾರ ರಾತ್ರಿ ಜೆಜೆ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಚಂದ್ರು ಕೊಲೆಗೆ ಕೋಮು ಕಾರಣ ನೀಡಿ ಎಡವಟ್ಟು ಮಾಡಿದ್ದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಕೆಲಹೊತ್ತಲ್ಲೇ ಕ್ಷಮೆಯಾಚಿಸಿದ್ದರು. ಇದೀಗ ಗೃಹ ಸಚಿವರ ಸ್ಪಷ್ಟನೆಯ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಉಲ್ಟಾ ಹೊಡೆದಿದ್ದಾರೆ.

- Advertisement -

ವಿಕಾಸಸೌಧದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸಿಟಿ ರವಿ, ಚಂದ್ರು ಕೊಲೆಗೆ ಉರ್ದು ಭಾಷೆ ಬರದೇ ಇರುವುದು ಕೂಡ ಕಾರಣ. ಆದರೆ ಇದು ಗಲಭೆಗೆ ಕಾರಣವಾಗಬಾರದು ಎನ್ನುವ ದೃಷ್ಟಿಯಿಂದ ಪೊಲೀಸರೇ ಗೃಹ ಸಚಿವರಿಂದ ಸುಳ್ಳು ಹೇಳಿಸಿದ್ದಾರೆಂದು ಹೇಳಿದ್ದಾರೆ.

ಬೈಕ್‌ ಅಪಘಾತದಿಂದ ಏನೂ ಆಗಿಲ್ಲ, ಅವರ ವಾಹನಕ್ಕೂ ಡ್ಯಾಮೇಜ್‌ ಆಗಿಲ್ಲ. ಭಾಷೆ ಬಾರದಿರುವುದು ಕೂಡ ಕಾರಣ ಎಂದು ಮೃತನ ತಾಯಿಯೇ ಹೇಳಿದ್ದಾರೆ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Join Whatsapp