ಪ್ರವಾದಿ ನಿಂದನೆ ಮಾಡಿದ್ದ ಪಾದ್ರಿ ವಿರುದ್ಧ ಪ್ರಕರಣ ದಾಖಲು

Prasthutha|

ತಿರುವನಂತಪುರಂ: ಪ್ರವಾದಿ ನಿಂದನೆ ಮಾಡಿದ್ದ ಕ್ರೈಸ್ತ  ಪಾದ್ರಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ಕೇರಳದ ಕಣ್ಣೂರು ಇರಿಟ್ಟಿ ಕುನ್ನೋತ್ ಸೆಮಿನರಿಯ ಪಾದ್ರಿ ಆಂಟನಿ ತಾರಕ್ಕಡವಿಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇರುಟ್ಟಿ ಮಣಿಕ್ಕಡವ್ ಸೈಂಟ್ ಥಾಮಸ್ ಚರ್ಚ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರು ದ್ವೇಷಪೂರಿತ ಭಾಷಣ ಮಾಡಿದ್ದರು.

- Advertisement -

ಹಿರಾ ಗುಹೆಯಲ್ಲಿ ಬಂದ ದೈವಿಕ ಸಂದೇಶವನ್ನು ಅವಹೇಳನ ಮಾಡಿದ್ದ ಪಾದ್ರಿ, ಮುಸ್ಲಿಮರು ಉಗುಳಿದ ಆಹಾರವನ್ನು ಹಲಾಲ್ ಎಂದು ಕರೆಯುತ್ತಾರೆ ಎಂದು ಹೇಳಿದ್ದರು.

ಪಾದ್ರಿಯ ಪ್ರಚೋದನಕಾರಿ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Join Whatsapp