ಕಳ್ಳತನದ ಆರೋಪ ಹೊರಿಸಿ ಪೊಲೀಸರಿಂದ ದೌರ್ಜನ್ಯ | ಮುಸ್ಲಿಂ ಕುಟುಂಬದ ನಾಲ್ವರ ಆತ್ಮಹತ್ಯೆ

Prasthutha|

ತಿರುಪತಿ : ಪೊಲೀಸ್ ದೌರ್ಜನ್ಯದಿಂದ ಬೇಸತ್ತು ಮುಸ್ಲಿಮ್ ಸಮುದಾಯದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆಯ ಬಳಿಕ, ವೀಡಿಯೊವೊಂದು ವೈರಲ್ ಆಗಿದ್ದು, ಪೊಲೀಸರ ದೌರ್ಜನ್ಯದಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾಗಿದೆ.

- Advertisement -

ಆಂಧ್ರ ಪ್ರದೇಶದ ನಂದ್ಯಾಲ್ ಪಟ್ಟಣದ ಶೇಖ್ ಅಬ್ದುಲ್ ಸಲಾಂ ಕುಟುಂಬದ ನಾಲ್ವರು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಗೆ ಸಂಬಂಧವೇ ಇಲ್ಲದ ಪ್ರಕರಣಗಳಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಇನ್ನು ತಮಗೆ ಈ ಕಿರುಕುಳ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಬ್ದುಲ್ ಸಲಾಂ ಕುಟುಂಬ ಸಾವಿಗೂ ಮುನ್ನ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಹೆಡ್ ಕಾನ್ಸ್ ಟೆಬಲ್ ನನ್ನು ಬಂಧಿಸಲಾಗಿದೆ. ಅಬ್ದುಲ್ ಸಲಾಂ ನಂದ್ಯಾಲ್ ನ ಆಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಈ ಕಳ್ಳತನದ ಆರೋಪದಲ್ಲಿ ಸಲಾಂ ಅನ್ನು ಜೈಲಿಗೆ ಕಳುಹಿಸಲಾಗಿತ್ತು.

- Advertisement -

ಜಾಮೀನಿನ ಮೇಲೆ ಸಲಾಂ ಬಿಡುಗಡೆಗೊಂಡಿದ್ದರು. ಆಗಲೂ ಪೊಲೀಸರು ಅವರನ್ನು ಬೆಂಬಿಡದೆ ಕಾಡಲಾರಂಭಿಸಿದ್ದರು. ಆ ನಂತರ ಸಲಾಂ ಆಟೊ ಓಡಿಸಲಾರಂಭಿಸಿದ್ದರು. ಆದರೆ, ಆಗಲೂ ಪೊಲೀಸರು ಆತನಿಗೆ ಕಿರುಕುಳ ನೀಡಲಾರಂಭಿಸಿದ್ದರು. ಆಭರಣ ಮಳಿಗೆಯ ಮಾಲಕನ ಪರವಹಿಸಿದ್ದ ಪೊಲೀಸರು ನೀಡಿದ ಕಿರುಕುಳಕ್ಕೆ ಬೇಸತ್ತು ಕುಟುಂಬವೇ ಬಲಿಯಾಗಿದೆ.  

Join Whatsapp