ವರ್ಷ 50 ಸಾವಿರ ಕೋಟಿ ರೂ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ: ಪ್ರಮೋದ್ ಮುತಾಲಿಕ್

Prasthutha|

ಧಾರವಾಡ: ದೇಶದಿಂದ ಪ್ರತಿ ವರ್ಷಕ್ಕೆ  50 ಸಾವಿರ ಕೋಟಿ ರೂ. ಮೌಲ್ಯದ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾಕೆ ಮೌನವಹಿಸಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.

- Advertisement -

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹಂತಕರು ಹಾಗೂ ಕಸಾಯಿ ಖಾನೆ ಬೆಳೆಸಿದ್ದು ಕಾಂಗ್ರೆಸ್. ಅದನ್ನು ಈಗ ಬಿಜೆಪಿ ಮುಂದುವರಿಸುತ್ತಿದೆ. ಪ್ರತಿ ವರ್ಷ 50 ಸಾವಿರ ಕೋಟಿ ರೂ. ಮೌಲ್ಯದಷ್ಟು ಗೋಮಾಂಸ ರಫ್ತು ಆಗುತ್ತಿದೆ. ಅದನ್ನು ಪ್ರಧಾನಿ ಮೋದಿ ಅವರು ಯಾಕೆ ಬಂದ್ ಮಾಡುತ್ತಿಲ್ಲ. ಮನಮೋಹನ ಸಿಂಗ್ ಸರ್ಕಾರ ಇದ್ದಾಗ ಮೋದಿಯವರೇ ಗೋ ರಫ್ತು ಬಗ್ಗೆ ಆರೋಪ ಮಾಡಿದ್ದರು ಎಂದು ತಿಳಿದರು.

Join Whatsapp