ಗುರ್ಗಾಂವ್ ನಲ್ಲಿ ನಮಾಝ್ ವೇಳೆ ಟ್ರಕ್ ಅಡ್ಡವಿಟ್ಟು ದಾಂಧಲೆ ನಡೆಸಿದ ಸಂಘಪರಿವಾರ

Prasthutha|

ನವದೆಹಲಿ: ಕಳೆದ ಎರಡು ತಿಂಗಳಿನಿಂದ ಸಂಘಪರಿವಾರ ಕಾರ್ಯಕರ್ತರು ಶುಕ್ರವಾರದ ನಮಾಝ್ ಗೆ ಟ್ರಕ್ ಅಡ್ಡವಿಟ್ಟು ಮತ್ತೆ ಅಡ್ಡಿಪಡಿಸಿದ್ದು, ಇದರ ನಡುವೆಯೇ ಮುಸ್ಲಿಮರು ನಮಾಝ್ ನಿರ್ವಹಿಸಿದ ಘಟನೆ ಹರ್ಯಾಣದ ಗುರ್ಗಾಂವ್ ನಿಂದ ವರದಿಯಾಗಿದೆ.

- Advertisement -

ಶುಕ್ರವಾರದ ನಮಾಝ್ ಗೆ ಮುಸ್ಲಿಮರು ಸಜ್ಜಾಗುತ್ತಿದ್ದಂತೆ ಸಂಘಪರಿವಾರದ ಕಾರ್ಯಕರ್ತರು ಜೈ ಶ್ರೀರಾಮ್ ಮತ್ತು ಭಾರತ್ ಮಾತಾಕೀ ಜೈ ಘೋಷಣೆಗಳೊಂದಿಗೆ ಆಗಮಿಸಿ ನಮಾಝ್ ಗೆ ಮತ್ತೆ ಅಡ್ಡಿಪಡಿಸಿದರು.

ಪ್ರಸಕ್ತ ಈ ಸ್ಥಳದಲ್ಲಿ ಸಂಘಪರಿವಾರ ಮತ್ತು ಸ್ಥಳೀಯರು ಸತತ ಮೂರನೇ ಬಾರಿಗೆ ನಮಾಝ್ ಗೆ ಅಡ್ಡಿಪಡಿಸುತ್ತಿದ್ದಾರೆ.

- Advertisement -

ಸೆಕ್ಟರ್ 47 ರಲ್ಲಿ ನಮಾಝ್ ನಿರ್ವಹಣೆಯ ವಿರುದ್ಧ ಪ್ರತಿಭಟನೆ ನಡೆಸಿದ ಭಾರತ್ ಮಾತಾ ವಾಹಿನಿಯ ಮುಖ್ಯಸ್ಥ ದಿನೇಶ್ ಠಾಕೂರ್ ಸೇರಿದಂತೆ ಕನಿಷ್ಠ ಏಳು ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಮುಸ್ಲಿಮರು ನಮಾಝ್ ನೆಪದಲ್ಲಿ ಭೂ ಜಿಹಾದ್ ನ ಪಿತೂರಿ ನಡೆಸುತ್ತಿದ್ದಾರೆ ಎಂದು ಬಂಧಿತ ಠಾಕೂರ್ ಠಾಣೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ದೂರಿದ್ದಾರೆ.

ಸಂಘಪರಿವಾರದ ಪ್ರತಿಭಟನೆಗೆ ಸಡ್ಡು ಹೊಡೆದು ಸುಮಾರು 15 ಮುಸ್ಲಿಮರು ನಮಾಝ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಘಪರಿವಾರ ನಮಾಝ್ ವಿರೋಧಿಸಿ ಪ್ರಚೋದನಕಾರಿ ಘೋಷಣೆ ಕೂಗಿ ನಮಾಝ್ ಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸದ್ಯ ಶುಕ್ರವಾರದ ನಮಾಝ್ ಗೆ ಅಡ್ಡಿ ಪಡಿಸಿದ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp