ತಮಿಳುನಾಡಿನಲ್ಲಿ ಅಮಿತ್ ಶಾ ಮೇಲೆ ವ್ಯಕ್ತಿಯಿಂದ ಫಲಕ ಎಸೆತ | ಕ್ಷಣಕಾಲ ಆತಂಕ

Prasthutha|

ಚೆನ್ನೈ : ತಮಿಳುನಾಡು ಪ್ರವಾಸಕ್ಕಾಗಿ ಚೆನ್ನೈಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ವ್ಯಕ್ತಿಯೊಬ್ಬರು ಫಲಕ ಎಸೆಯುವ ಮೂಲಕ ಕ್ಷಣಕಾಲ ಆತಂಕಕ್ಕೆ ಕಾರಣವಾದ ಬಗ್ಗೆ ವರದಿಯಾಗಿದೆ.

- Advertisement -

ಇಂದು ನಗರಕ್ಕೆ ಶಾ ಭೇಟಿ ನೀಡಿದ್ದು, ವಿಮಾನ ನಿಲ್ದಾಣದ ಬಳಿ ತಮ್ಮನ್ನು ಸ್ವಾಗತಿಸಲು ಬಂದ ಪ್ರೇಕ್ಷಕರಿಗೆ ಶುಭಾಶಯ ಕೋರಲು ಅವರು ವಾಹನದಿಂದ ಕೆಳಗೆ ಇಳಿದಿದ್ದರು. ಈ ವೇಳೆ ಸುಮಾರು 60 ವರ್ಷದ ವ್ಯಕ್ತಿಯೊಬ್ಬರು ಶಾ ಮೇಲೆ ಫಲಕ ಎಸೆದಿದ್ದಾರೆ. ಆದರೆ, ಅದು ಶಾ ಅವರಿಗೆ ತಗುಲಲಿಲ್ಲ.

ಫಲಕ ಎಸೆದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಫಲಕ ಎಸೆದ ವ್ಯಕ್ತಿಯನ್ನು ದುರೈರಾಜ್ ಎಂದು ಗುರುತಿಸಲಾಗಿದೆ. ದುರೈ ರಾಜ್ ಓರ್ವ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp