50 ಪ್ರಯಾಣಿಕರನ್ನು ಬಿಟ್ಟು ಹೋದ ವಿಮಾನ: ತನಿಖೆಗೆ ಆದೇಶ

Prasthutha|

ಬೆಂಗಳೂರು: ದೆಹಲಿಗೆ ಹೋಗಬೇಕಿದ್ದ 50 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಗೋ ಫಸ್ಟ್ ವಿಮಾನ ಟೇಕಾಫ್ ಆದ ಘಟನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಈ ಬಗ್ಗೆ ತನಿಖೆಗೆ ಡಿಜಿಸಿಎ ಆದೇಶಿಸಿದೆ.

- Advertisement -

ಅನೇಕ ಪ್ರಯಾಣಿಕರು ವಿಮಾನಯಾನ ಸಂಸ್ಥೆಯನ್ನು ಟ್ವಿಟ್ಟರ್’ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ, ಇದು “ಅತ್ಯಂತ ಭಯಾನಕ ಅನುಭವ” ಎಂದು ಟೀಕಿಸಿದ್ದಾರೆ.

ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಜಿ8 116 ವಿಮಾನ ಈ ತಪ್ಪನ್ನು ಎಸಗಿದೆ. ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ನಿಲ್ದಾಣದಲ್ಲಿದ್ದ ಕಚೇರಿಯ ಸಿಬ್ಬಂದಿಯ ನಡುವೆ ಸಂವಹನ ಕೊರತೆಯಿಂದ ಈ ತಪ್ಪು ಸಂಭವಿಸಿದೆ ಎನ್ನಲಾಗಿದೆ.

- Advertisement -

ವಿಮಾನ ಹತ್ತಲು ಪ್ರಯಾಣಿಕರನ್ನು ನಾಲ್ಕು ಬಸ್ ಗಳಲ್ಲಿ ವಿಮಾನದ ಹತ್ತಿರ ಕರೆದೊಯ್ಯಲಾಯಿತು. ಮೂರು ಬಸ್ ಗಳಲ್ಲಿದ್ದ ಪ್ರಯಾಣಿಕರು ವಿಮಾನವೇರಿದ್ದರು. ಇನ್ನೊಂದು ಬಸ್ಸಿನಲ್ಲಿ ಪ್ರಯಾಣಿಕರು ಬರುತ್ತಿದ್ದರು. ಅಷ್ಟರಲ್ಲೇ ವಿಮಾನ ಹಾರಾಟ ನಡೆಸಿ ದೆಹಲಿಗೆ ಪ್ರಯಾಣಿಸಿದೆ.

 ಗೋ ಫಸ್ಟ್ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಸುಮಾರು 55 ಪ್ರಯಾಣಿಕರಿದ್ದ ಒಂದು ಬಸ್ ಕಾಯುತ್ತಲೇ ಇತ್ತು ಎಂದು ವಿಮಾನಯಾನ ಸಂಸ್ಥೆ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಹಲವು ಪ್ರಯಾಣಿಕರು ಟ್ಯಾಗ್ ಮಾಡಿದ ಟ್ವಿಟ್ಟರ್’ನಲ್ಲಿ ದೂರು ನೀಡಿದ್ದಾರೆ.



Join Whatsapp