ದೆಹಲಿಯಲ್ಲಿ ಪ್ರತಿಭಟನೆ ನಿರತರಾಗಿರುವ ಅನ್ನದಾತರಿಗೆ ಕೇರಳದ ರೈತರಿಂದ ಟ್ರಕ್ ತುಂಬಾ ಅನಾನಾಸು ರವಾನೆ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಕೊರೆವ ಚಳಿಯಲ್ಲೂ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗಾಗಿ, ಕೇರಳದ ರೈತರು ಟ್ರಕ್ ತುಂಬಾ ಅನಾನಾಸು (ಫೈನಾಪಲ್)ಗಳನ್ನು ಕಳುಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

- Advertisement -

ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಿರತರಾಗಿರುವ ರೈತರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ದೇಶಾದ್ಯಂತ ಜನರು ಕಳುಹಿಸುತ್ತಿದ್ದು, ಕೇರಳ ರೈತರೂ ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

ವಾಝಕ್ಕುಳಂ ಪೈನಾಪಲ್’ ಎಂದೇ ಪ್ರಸಿದ್ಧಿ ಪಡೆದಿರುವ ವಾಝಕ್ಕುಳಂ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಸುಮಾರು 20 ಟನ್ ಗಿಂತಲೂ ಹೆಚ್ಚು ಪೈನಾಪಲ್ ಅನ್ನು ಟ್ರಕ್ ನಲ್ಲಿ ತುಂಬಿಸಿ ದೆಹಲಿಗೆ ಕಳುಹಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಪೈನಾಪಲ್ ಬೆಳೆಯುವ ರೈತರ ಸಂಘ ಈ ಕೊಡುಗೆ ನೀಡಿದೆ.



Join Whatsapp