ಕುಖ್ಯಾತ ರೌಡಿ ಪಲ್ಲು ಕೊಲೆ

Prasthutha|

ಬೆಂಗಳೂರು: ಇತ್ತೀಚಿಗಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದ ಕುಖ್ಯಾತ ರೌಡಿ‌ ರಾಹುಲ್ ಅಲಿಯಾಸ್ ಪಲ್ಲುನನ್ನು ಮಚ್ಚು-ಲಾಂಗ್ ನಿಂದ ಕೊಚ್ಚಿ ಭೀಕರವಾಗಿ‌ ಕೊಲೆಗೈದಿರುವ ಘಟನೆ ನಿನ್ನೆ
ಮಧ್ಯರಾತ್ರಿ ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿದೆ.

- Advertisement -

ಬೈಯಪ್ಪನಹಳ್ಳಿಯ ರೌಡಿ ರಾಹುಲ್ ಅಲಿಯಾಸ್ ಪಲ್ಲುನನ್ನು ಕೃಷ್ಣಯ್ಯನಪಾಳ್ಯದ ಆಟೋ ಸ್ಟಾಂಡ್ ಬಳಿ‌ ಮಧ್ಯರಾತ್ರಿ ದುಷ್ಕರ್ಮಿಗಳು ಮಚ್ಚು-ಲಾಂಗ್ ಗಳಿಂದ ನಿಂದ ಕೊಚ್ಚಿ ಭೀಕರವಾಗಿ‌ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ರಾಮಮೂರ್ತಿ ನಗರ ರೌಡಿ ಪಾಲ್ ರವಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಕೃತ್ಯದ 6ನೇ ಆರೋಪಿಯಾಗಿ ಜೈಲು ಸೇರಿದ್ದ ರೌಡಿ ಪಲ್ಲು ಕೆಲ ದಿನಗಳ ಹಿಂದಷ್ಟೇ ಜಾಮೀನಿನ ‌ಮೇಲೆ ಹೊರಬಂದಿದ್ದ.
ಕೃಷ್ಣಯ್ಯನಪಾಳ್ಯದ ಆಟೋ ಸ್ಟ್ಯಾಂಡಿಗೆ ರಾಹುಲ್ ಹೋಗಿದ್ದ ವೇಳೆ ಸತ್ಯವೇಲು ಹಾಗೂ ಮುರುಗನ್ ಎಂಬ ಆಟೋ ಚಾಲಕರ ನಡುವೆ ನಡೆದ ಗಲಾಟೆ ಅತಿರೇಕಕ್ಕೆ ಹೋಗಿತ್ತು.

- Advertisement -

ಗಲಾಟೆಯಲ್ಲಿ ತೊಡಗಿದ್ದ ಮುರುಗನ್ ಗೆ ರೌಡಿ ಪಲ್ಲು ಸ್ನೇಹಿತನಾಗಿದ್ದು ಆತನ ಪರವಾಗಿ ಗಲಾಟೆಗೆ ಇಳಿದಿದ್ದು,ಇದರಿಂದ ಆಕ್ರೋಶಗೊಂಡ ಆಟೋಚಾಲಕರಾದ ಅರುಣ್ ಹಾಗೂ ಸತ್ಯವೇಲು ರಾಹುಲ್ ಕೊಲೆಗೆ ಸಂಚು ರೂಪಿಸಿದ್ದರು.

ಅದರಂತೆ ತಡರಾತ್ರಿ ಆಟೋದಲ್ಲಿ ಬಂದು ರೌಡಿ ಪಲ್ಲು ನನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ‌ ಪ್ರಕರಣ ದಾಖಲಿಸಿರುವ ಬೈಯಪ್ಪನಹಳ್ಳಿ‌ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Join Whatsapp