ಈಶಾನ್ಯ ದಿಲ್ಲಿ ಗಲಭೆ ಪ್ರಕರಣ: ಇಶ್ರತ್ ಜಹಾನ್ ಜಾಮೀನು ಆದೇಶ ಪ್ರಶ್ನಿಸಿದ ಪೊಲೀಸರು

Prasthutha|

ನವದೆಹಲಿ: 2020 ರಲ್ಲಿ ನಡೆದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಜುಲೈ 11 ರಂದು ವಿಚಾರಣೆ ನಡೆಸಲಿದೆ.

- Advertisement -

ಫೆಬ್ರವರಿ 26, 2020 ರಂದು ಆಕೆಯನ್ನು ಬಂಧಿಸಲಾಗಿತ್ತು.

ಇಶ್ರತ್ ಜಹಾನ್ ಗಲಭೆಗೆ ದೈಹಿಕವಾಗಿ ಹಾಜರಿರಲಿಲ್ಲ ಮತ್ತು ಅವರು ಯಾವುದೇ ಗುಂಪಿನ ಭಾಗವಾಗಿರಲಿಲ್ಲ ಎಂದು ಗಮನಿಸಿದ ಕೆಳ ನ್ಯಾಯಾಲಯವು ಈ ಪ್ರಕರಣದಲ್ಲಿ ಮಾರ್ಚ್ 14 ರಂದು ಆಕೆಗೆ ಜಾಮೀನು ನೀಡಿತ್ತು.

- Advertisement -

ಇಶ್ರತ್ ಅವರ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಅದರಂತೆ, ರಾಜ್ಯದ ಕೋರಿಕೆಯ ಮೇರೆಗೆ, ಈ ವಿಷಯದ ಬಗ್ಗೆ ಜುಲೈ 11 ರ ಸೋಮವಾರದಂದು ನ್ಯಾಯಾಲಯವು ವಿಚಾರಣೆ ನಡೆಸಲಿದೆ.

Join Whatsapp