ವೀಕೆಂಡ್ ಕರ್ಫ್ಯೂ ಬೇಡ : ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘ ಒತ್ತಾಯ

Prasthutha|

ಸುಂಟಿಕೊಪ್ಪ: ಕೊರೋನಾ ನಿಯಂತ್ರಣಕ್ಕಾಗಿ ಸರಕಾರ ಜಾರಿಗೆ ತಂದಿರುವ ವೀಕೆಂಡ್ ಲಾಕ್ ಡೌನ್ ಅವೈಜ್ಞಾನಿಕವಾಗಿದೆ, ಇದರಿಂದ ನಿತ್ಯ ದುಡಿದು ತಿನ್ನುವವರಿಗೆ ಕಷ್ಟವಾಗುತ್ತಿದ್ದು, ಲಾಕ್ ಡೌನ್ ಕೈಬಿಡಬೇಕೆಂದು ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘ ಒತ್ತಾಯಿಸಿದೆ.

- Advertisement -

ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ವಿ.ಎ.ವೆಂಕಟೇಶ್ ಕೆಲವು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ವರ್ಕ್ ಶಾಪ್ ಸೇರಿದಂತೆ ಇನ್ನೂ ಕೆಲವು ಸಣ್ಣಪುಟ್ಟ ವ್ಯವಹಾರಗಳಿಗೆ ಕಡಿವಾಣ ಹಾಕಲಾಗಿದೆ. ಈ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು ಎಲ್ಲಾ ಅಂಗಡಿಗಳನ್ನು ಮತ್ತು ವರ್ಕ್ ಶಾಪ್ ಗಳನ್ನು ತೆರೆಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

Join Whatsapp