ದೇವಾಲಯದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ; ದ್ವೇಷ ರಾಜಕಾರಣಕ್ಕೆ ಜಾಗವಿಲ್ಲ: ಸಿದ್ದರಾಮಯ್ಯ ಆಕ್ರೋಶ

Prasthutha|

ಮೈಸೂರು: ರಾಜ್ಯದ ಹಲವು ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಿಷೇಧ ಹೇರಿರುವುದನ್ನು ವಿರೋಧಿಸಿ ಸರ್ಕಾರದ ತಮ್ಮ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ದ್ವೇಷ ರಾಜಕಾರಣಕ್ಕೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.

- Advertisement -

ಸೌಹಾರ್ದ ರಾಜಕಾರಣಕ್ಕೆ ಮುಕ್ತ ಅವಕಾಶ ನೀಡುವಂತಾಗಬೇಕೆಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆಡಳಿತಾರೂಢ ಬಿಜೆಪಿ ಪಕ್ಷವು ಕೇವಲ ವೋಟಿಗಾಗಿ ಧ್ರುವೀಕರಣ ಮಾಡುತ್ತಿದೆ. ಹಿಜಾಬ್ ಮತ್ತು ಚರ್ಚ್ ಗಳ ಮೇಲಿನ ದಾಳಿಯು ಮತ ಧ್ರುವೀಕರಣದ ಒಂದು ಭಾಗವೆಂದು ಅವರು ತಿಳಿಸಿದ್ದಾರೆ.

Join Whatsapp