ಬಾಂಗ್ಲಾ ಕೋಮು ಗಲಭೆಯ ವೇಳೆ ಅತ್ಯಾಚಾರ, ದೇವಾಲಯ ಧ್ವಂಸದಂತಹ ಕೃತ್ಯ ನಡೆದಿಲ್ಲ: ಸರ್ಕಾರ ಸ್ಪಷ್ಟನೆ

Prasthutha|

►ಕೆಲವು ಮಾಧ್ಯಮಗಳು ಕಟ್ಟುಕತೆಗಳನ್ನು ಸೃಷ್ಟಿಸುತ್ತವೆ

- Advertisement -

ನವದೆಹಲಿ: ಬಾಂಗ್ಲಾ ಕೋಮುಗಲಭೆಗಳಲ್ಲಿ ದೇಶದಲ್ಲಿ ಯಾರೊಬ್ಬರ ಮೇಲೂ ಅತ್ಯಾಚಾರ ನಡೆದಿಲ್ಲ ಮತ್ತು ಒಂದೇ ಒಂದು ಹಿಂದೂ ದೇವಾಲಯವೂ ಧ್ವಂಸವಾಗಿಲ್ಲ ಎಂದು ಬಾಂಗ್ಲಾ ಹಿಂಸಾಚಾರಗಳ ಕುರಿತು ಅಲ್ಲಿನ ವಿದೇಶಾಂಗ ಸಚಿವ ಡಾ.ಎ.ಕೆ.ಅಬ್ದುಲ್ ಮೊಮೆನ್ ಹೇಳಿಕೆ ಬಿಡುಗಡೆ ಮಾಡಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ.


ಇತ್ತೀಚಿನ ಹಿಂಸಾಚಾರದಲ್ಲಿ ಕೇವಲ 6 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ಮುಸ್ಲಿಮರು, ಇಬ್ಬರು ಹಿಂದೂಗಳು. ಇವರೆಲ್ಲರೂ ಪೊಲೀಸರ ಎನ್ ಕೌಂಟರ್ ನಲ್ಲಿ ಕೊಲ್ಲಲ್ಪಟ್ಟವರು, ಎಂದು ಅವರು ತಿಳಿಸಿದ್ದಾರೆ.

- Advertisement -


ಇಬ್ಬರು ಹಿಂದೂಗಳ ಪೈಕಿ ಒಬ್ಬರದ್ದು ಸಹಜ ಸಾವಾಗಿದೆ. ಇನ್ನೊಬ್ಬರು ಕೊಳಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರದ ವೇಳೆ ಅತ್ಯಾಚಾರಗಳು ನಡೆದಿಲ್ಲ. ಒಂದೇ ಒಂದು ದೇವಾಲಯವೂ ನಾಶಗೊಂಡಿಲ್ಲ. ಆದರೆ, ದೇವಾಲಯಗಳಲ್ಲಿದ್ದ ವಿಗ್ರಹಗಳು ಭಗ್ನಗೊಂಡಿವೆ. ಹಿಂಸಾಚಾರ ದುರದೃಷ್ಟಕರ, ನಡೆಯಬಾರದಿತ್ತು. ಆದರೆ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.


ದುರ್ಘಟನೆಯಲ್ಲಿ 20 ಮನೆಗಳನ್ನು ಸುಟ್ಟುಹಾಕಲಾಗಿದೆ. ಅವುಗಳನ್ನು ಈಗ ಮರುನಿರ್ಮಾಣ ಮಾಡಲಾಗಿದೆ. ಎಲ್ಲರಿಗೂ ಪರಿಹಾರ ಸಿಕ್ಕಿದೆ ಹೆಚ್ಚಿನ ಪರಿಹಾರ ಕಲ್ಪಿಸುವ ಕಾರ್ಯದ ಕಡೆಗೂ ಪ್ರಯತ್ನಗಳು ನಡೆಯುತ್ತಿವೆ ಎಂದು ಆಶ್ವಾಸನೆ ನೀಡಿದರು.
ಕೆಲವು ಮಾಧ್ಯಮಗಳು ಮತ್ತು ವ್ಯಕ್ತಿಗಳು ಕಟ್ಟುಕತೆಗಳನ್ನು ಹರಡುತ್ತಿದ್ದಾರೆ. ಈ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಬದ್ಧವಾಗಿರುವ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಇದನ್ನು ಮಾಡಲಾಗಿದೆ ಎಂದು ಅವರು ಟೀಕಿಸಿದರು.

Join Whatsapp