ಮನಮೋಹನ್ ಸಿಂಗ್ ರನ್ನು ಹಾಡಿ ಹೊಗಳಿದ ನಿತಿನ್ ಗಡ್ಕರಿ

Prasthutha|

ನವದೆಹಲಿ: ಆರ್ಥಿಕ ಸುಧಾರಣೆಗಳಿಗಾಗಿ ಭಾರತವು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -


ಪೋರ್ಟಲ್ ‘ಟ್ಯಾಕ್ಸ್ ಇಂಡಿಯಾ ಆನ್ಲೈನ್’ ಆಯೋಜಿಸಿದ್ದ ಟಿಐಒಎಲ್ ಅವಾರ್ಡ್ಸ್ 2022 ಸಮಾರಂಭದಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ 1991ರಲ್ಲಿ ಹಣಕಾಸು ಸಚಿವರಾಗಿ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು ಮತ್ತು ಅದು ಉದಾರ ಆರ್ಥಿಕತೆಗೆ ನಾಂದಿ ಹಾಡಿದೆ.


ಬಡ ಜನರಿಗೆ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಭಾರತಕ್ಕೆ ಉದಾರ ಆರ್ಥಿಕ ನೀತಿಯ ಅಗತ್ಯವಿದೆ ಎಂದು ಒತ್ತಿ ಹೇಳಿದರು.

Join Whatsapp