ಹೊಸ ‘ಬಿಂಗೊ’ ಜಾಹೀರಾತು ನಟ ಸುಶಾಂತ್ ಸಿಂಗ್ ರನ್ನು ಅಣಕಿಸಿತೇ? | ಸಾಮಾಜಿಕ ಜಾಲತಾಣದಲ್ಲಿ ಕೆಲವರ ಆಕ್ರೋಶ

Prasthutha|

ಮುಂಬೈ : ‘ಬಿಂಗೊ’ ಸ್ನಾಕ್ ಜಾಹೀರಾತಿನಲ್ಲಿ ಇತ್ತೀಚೆಗೆ ಆತ್ಮಹತ್ಯೆಗೈದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಅವಮಾನಿಸಿದೆ ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟಪಡಿಸಿರುವ ಐಟಿಸಿ ಫೂಡ್ಸ್, ಜಾಹೀರಾತಿನಲ್ಲಿ ಯಾವುದೇ ಬಾಲಿವುಡ್ ಸೆಲೆಬ್ರಿಟಿಯನ್ನು ಅಣಕಿಸುವ ಉದ್ದೇಶವಿರಲಿಲ್ಲ ಎಂದು ಹೇಳಿದೆ.

- Advertisement -

ಜಾಹೀರಾತಿನಲ್ಲಿ ನಟ ರಣವೀರ್ ಸಿಂಗ್ ಬಿಂಗೊ ತಿನ್ನುವ ವ್ಯಕ್ತಿಯೊಬ್ಬನ ಪಾತ್ರ ನಿಭಾಯಿಸುತ್ತಾರೆ. ಅದರಲ್ಲಿ, ಅವರೊಂದಿಗೆ ನಿಮ್ಮ ಮುಂದಿನ ಯೋಜನೆ ಏನು ಎಂದು ಹಲವು ಮಂದಿ ಕೇಳುತ್ತಿರುತ್ತಾರೆ. ಆಗ ರಣವೀರ್ ಸಿಂಗ್ ಆಲ್ಗೊರಿದಮ್ಸ್, ಪ್ಯಾರಾಡೊಕ್ಸಿಕಲ್, ಫೋಟೊನ್ಸ್ ಆಂಡ್ ಏಲಿಯನ್ಸ್ ಬಗ್ಗೆ ಮಾತನಾಡುತ್ತಾರೆ. ಎಲ್ಲಿಯೂ ಸುಶಾಂತ್ ಸಿಂಗ್ ಹೆಸರು ಪ್ರಸ್ತಾಪವಾಗುವುದಿಲ್ಲ.

ಆದರೆ, ಸುಶಾಂತ್ ಸಿಂಗ್ ಅಭಿಮಾನಿಗಳು ಎಂದು ಹೇಳಿಕೊಂಡಿರುವ ಕೆಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ, ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೃತ ನಟನ ವಿಜ್ಞಾನದ ಕುರಿತ ಆಸಕ್ತಿ, ಮುಖ್ಯವಾಗಿ ಬಾಹ್ಯಾಕಾಶ ಕುರಿತ ಅವರ ಆಸಕ್ತಿಯೊಂದಿಗೆ ಇದು ಹೊಂದಿಕೆಯಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

- Advertisement -

ಜಾಹೀರಾತು ಕಳೆದ ವರ್ಷ ಚಿತ್ರೀಕರಿಸಲಾಗಿತ್ತು, ಉತ್ಪನ್ನ ಲೋಕಾರ್ಪಣೆ ತಡವಾಗಿದ್ದುದರಿಂದ, ಈಗ ಬಿಡುಗಡೆಗೊಳಿಸಲಾಗಿದೆ. ಆರೋಪಗಳು ಸಂಪೂರ್ಣ ಸುಳ್ಳು, ತಪ್ಪಾದುದು ಮತ್ತು ಚೇಷ್ಟೆಯಿಂದ ಕೂಡಿದುದು ಎಂದು ಐಟಿಸಿ ಫೂಡ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಜಾಹೀರಾತನ್ನು ಅದು ಡಿಲಿಟ್ ಮಾಡಿಲ್ಲ.    

Join Whatsapp