NEP ಸಮಾನತೆ ಹಾಗೂ ಗುಣಮಟ್ಟ ಶಿಕ್ಷಣಕ್ಕೆ ಮಾರಕ: ಮಧು ಬಂಗಾರಪ್ಪ

Prasthutha|

ಬೆಂಗಳೂರು : ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಮಾನತೆ ಹಾಗೂ ಗುಣಮಟ್ಟ ಶಿಕ್ಷಣಕ್ಕೆ ಮಾರಕ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

- Advertisement -

ಕರ್ನಾಟಕಕ್ಕೆ ಜನಪರ ಶಿಕ್ಷಣ ನೀತಿಗೆ ಆಗ್ರಹಿಸಿ ಬೆಂಗಳೂರಿನ‌ ಗಾಂಧಿಭವನದಲ್ಲಿ‌ ಎಐಎಸ್ ಇ ಸಿ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ‌ ಪಾಲ್ಗೊಂಡು ಮಾತನಾಡಿದ ಅವರು ಎನ್ ಇಪಿಗೆ ವಿರೋಧ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ‌ ಮಹದೇಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಶಿಕ್ಷಣ ತಜ್ಞರಾದ ಡಾ. ಮೈಕಲ್ ವಿಲಿಯಮ್ಸ್, ಯುಜಿಸಿ‌ ಮಾಜಿ ಅಧ್ಯಕ್ಷ ಸುಖದೇವ್‌‌ ಥೋರಟ್, ಹಂಪಿ ವಿಶ್ವವಿದ್ಯಾಲಯ ‌ಮಾಜಿ ಕುಲಪತಿ ಡಾ.ಎ ಮುರಿಗೆಪ್ಪ , ಶಿಕ್ಷಣ ತಜ್ಞರು, ಚಿಂತಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Join Whatsapp