ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಅಥವಾ ಡಿಸಿಎಂ ಮಾಡಲಿಲ್ಲ: ಸಿಎಂ ಇಬ್ರಾಹಿಂ

Prasthutha|

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕ ಕಳೆದರೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬನೇ ಒಬ್ಬ ನಾಯಕನನ್ನೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಥವಾ ಉಪ ಮುಖ್ಯಮಂತ್ರಿಯ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಪರಿಗಣಿಸದ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -


ವಿಧಾನ ಸಭೆ ಚುನಾವಣೆಯಲ್ಲಿ ಸೋತ ಪರಮೇಶ್ವರ ಅವರನ್ನು ಎಂ ಎಲ್ ಸಿ ಮಾಡಿ ಉಪ ಮುಖ್ಯಮಂತ್ರಿ ಮಾಡಬಹುದಾದರೆ ಗೆದ್ದಿರುವ ಒಬ್ಬ ಮುಸ್ಲಿಮ್ ನಾಯಕನನ್ನು ಯಾಕೆ ಡಿ ಸಿ ಎಂ ಮಾಡಬಾರದು ಎಂದು ಅವರು ಪ್ರಶ್ನಿಸಿದರು.


ಇಂತಹ ವಿಚಾರ ಮಾತನಾಡುವಾಗ ಪಕ್ಷದ ಹಿರಿಯ ನಾಯಕರು ಉಡಾಫೆ ಮತ್ತು ಉದ್ಧಟತನದ ಉತ್ತರಗಳನ್ನು ನೀಡಿದ್ದರಿಂದ ತಮಗೆ ಪಕ್ಷದ ಬಗ್ಗೆ ಹತಾಶೆಯಾಗಿದೆ ಎಂದು ಅವರು ಹೇಳಿದರು.

Join Whatsapp