ನಕ್ಸಲ್ ಕೇಸ್: ಚಿನ್ನಿ ರಮೇಶ್ ಖುಲಾಸೆ 

Prasthutha|

ಮಂಗಳೂರು: ನಕ್ಸಲ್ ಆರೋಪದಲ್ಲಿ ಬಂಧಿತನಾಗಿದ್ದ ಚಿನ್ನಿ ರಮೇಶ್ ಅವರನ್ನು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ನ್ಯಾಯಾಧೀಶರು ದೋಷ ಮುಕ್ತ ಆದೇಶ ನೀಡಿದ್ದಾರೆ.

- Advertisement -

 2013, ನವೆಂಬರ್ 9ರಂದು ಬೆಳಗಿನ ಜಾವ 2 ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ಎಂಬಲ್ಲಿ ರಾಮಚಂದ್ರ ಭಟ್ ಎಂಬವರ ಮನೆ ಅಂಗಳಕ್ಕೆ ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾದ ಚಿನ್ನಿ ರಮೇಶ್ ಅಲಿಯಾಸ್ ರಮೇಶ್ ಅಲಿಯಾಸ್ ಶಿವಕುಮಾರ್ , ಇತರ ಆರೋಪಿಗಳಾದ  ವಿಕ್ರಂ ಗೌಡ,  ಸಾವಿತ್ರಿ, ಸುಂದರಿ, ವಿಜಯ್, ಜಯಣ್ಣ ಮತ್ತು ಇತರರೊಂದಿಗೆ ಸೇರಿಕೊಂಡು ಪ್ರವೇಶ ಮಾಡಿ ದೂರುದಾರ ರಾಮಚಂದ್ರ ಭಟ್ ಇವರ ಮನೆಯ ಬಾಗಿಲನ್ನು ಬಡಿದು ಹೊರಗೆ ಕರೆದರು.

ರಾಮಚಂದ್ರ ಭಟ್ ಅವರು ಮನೆಯಿಂದ ಹೊರಗಡೆ ಬಾರದೆ ಇದ್ದಾಗ ಅವರ ಮನೆಯ ಅಂಗಳದಲ್ಲಿ ಇದ್ದ KA 18 V 5816 ಮೋಟಾರು ಸೈಕಲ್ ಮತ್ತು KA 21 N ಮಾರುತಿ OMNI ಕಾರಿಗೆ ಬೆಂಕಿ ಹಚ್ಚಿ ಹಾಕಿದ್ದಾರೆ ಮತ್ತು ಆ ಮೂಲಕ ದೂರುದಾರರಿಗೆ ಸುಮಾರು 2,69,555ರಷ್ಟು ನಷ್ಟ ಉಂಟು ಮಾಡಿದ್ದರು ಎಂದು ದೋಷಾರೋಪಣಾ ಪಟ್ಟಿಯನ್ನು ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಷರ ನ್ಯಾಯಾಯಾಲಯದಲ್ಲಿ ಸಲ್ಲಿಸಲಾಗಿತ್ತು.

- Advertisement -

ಆರೋಪಿಗಳ ಮೇಲೆ ಈ ಕೆಳಗಿನ ಕಾಯ್ದೆಯ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು, UAPA- ಸೆಕ್ಷನ್ 10(B), ಮತ್ತು 13

Indian Arms Act section 3,25,  IPC ಸೆಕ್ಷನ್ 143,147,148,447,435,427 ಜೊತೆಗೆ 149ರಡಿ ಪ್ರಕರಣ ದಾಖಲಿಸಲಾಗಿತ್ತು.

ಆರಂಭಿಕವಾಗಿ ತನಿಖೆ ಕೈಗೊಂಡ ಬಂಟ್ವಾಳ DYSP ಯಾದ ರವೀಶ್ ಕ್ರಿಕೆಟ್ ಅವರು  ಆರೋಪಿಗಳನ್ನು ಪತ್ತೆ ಮಾಡುವ ಸಾಧ್ಯತೆ ಕಡಿಮೆ ಇರುವುದರಿಂದ ಇದೊಂದು ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ C ಅಂತಿಮ ವರದಿಯನ್ನು ದಿನಾಂಕ 17-01-2017 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆ ಬಳಿಕ ಉಡುಪಿಯಲ್ಲಿ SP ಯಾಗಿದ್ದ ಪ್ರಸ್ತುತ ರಾಜಕಾರಣಿಯಾಗಿರುವ ಅಣ್ಣಾಮಲೈ ಅವರು ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಿ ರಮೇಶ್ ಎಂಬಾತನನ್ನು ವಶಕ್ಕೆ ಪಡೆದು ಈ ಪ್ರಕರಣದ ಆರೋಪಿತನೆಂದು ಗುರುತಿಸಿ ಈ ಪ್ರಕರಣವನ್ನು ಮರುತನಿಖೆಗೆ ಆದೇಶಿಸಿದ್ದರು.

ಮರು ತನಿಖೆಯನ್ನು ಆರಂಭಿಸಿದ DYSP ರವೀಶ್ CR ಆರೋಪಿ ಚಿನ್ನಿ ರಮೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೇಲಿನಂತೆ ಆರೋಪಪಟ್ಟಿಯನ್ನು ತಯಾರಿಸಿ ದಿನಾಂಕ 127-2017 ರಂದು ಸಲ್ಲಿಸಿದ್ದರು.

ವಿಚಾರಣೆ ಆರಂಭಿಸಿದ ಜಿಲ್ಲಾ ನ್ಯಾಯಾಲಯ ಆರೋಪ ಪಟ್ಟಿಯಲ್ಲಿದ್ದ ಒಟ್ಟು 22 ಸಾಕ್ಷಿಗಳಲ್ಲಿ 9 ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆ ಮಾಡಿತು. ಅದರಲ್ಲಿ 5 ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು.

2013ರ ಸಮಯದಲ್ಲಿ ಕುತ್ ಲೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಸರಕಾರ ಒಕ್ಕಲು ಎಬ್ಬಿಸುತ್ತಿತ್ತು. ಈ ಸಂದರ್ಭ ದೂರುದಾರ ರಾಮಚಂದ್ರ ಭಟ್ ಅರಣ್ಯವಾಸಿಗಳನ್ನು ಒಕ್ಕಲು ಎಬ್ಬಿಸುವ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಕ್ಸಲರು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

2022, ಅಕ್ಟೋಬರ್ 10ರಂದು ನ್ಯಾಯಾಲಯ ಅಂತಿಮ ನಿರ್ಣಯವನ್ನು ಪ್ರಕಟಿಸಿ ಆರೋಪಿ ಚಿನ್ನಿ ರಮೇಶ್ ನನ್ನು ದೋಷ ಮುಕ್ತ ಗೊಳಿಸಿದೆ. ಚಿನ್ನಿ ರಮೇಶ್ ವಿರುದ್ಧ ಚಿಕ್ಕ ಮಗಳೂರಿನಲ್ಲಿ 4 ಕೇಸ್ ಗಳು ವಿಚಾರಣೆಯಲ್ಲಿ ಇದ್ದು ಪ್ರಸ್ತುತ ಬೆಂಗಳೂರು ಜೈಲ್ ನಲ್ಲಿ ಇದ್ದಾರೆ. ದೂರುದಾರ ರಾಮಚಂದ್ರ ಭಟ್ ಆತನ ಪತ್ನಿ ಹಾಗೂ ಇತರ ಸಾಕ್ಷಿಗಳು prosecution ಪರವಾಗಿ ಸಾಕ್ಷ್ಯ ನೀಡಿದ್ದರು.

ಚಿನ್ನಿ ರಮೇಶ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು ಉಳಿದವರನ್ನು ತಲೆಮಾರೆಸಿಕೊಂಡ ಆರೋಪಿಗಳು ಎಂದು ಪರಿಗಣಿಸಲಾಗಿದೆ.

ಆರೋಪಿ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ವಾದಿಸಿದ್ದರು.

Join Whatsapp