ರಷ್ಯಾ ದಾಳಿಗೆ ಮೃತಪಟ್ಟಿದ್ದ ನವೀನ್ ಮೃತದೇಹ ಭಾನುವಾರ ಭಾರತಕ್ಕೆ

Prasthutha|

ಬೆಂಗಳೂರು: ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದ ಭಾರತೀಯ ವಿದ್ಯಾರ್ಥಿ ನವೀನ್ ಎಸ್ ಜಿ ಮೃತದೇಹ ಭಾನುವಾರ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾರ್ಚ್ 1ರಂದು ಉಕ್ರೇನ್ ಖಾರ್ಕಿವ್‌ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ನವೀನ್ ಎಸ್ ಜಿ ಬಲಿಯಾಗಿದ್ದಾರೆ.

- Advertisement -

ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಯ ನಿವಾಸಿಯಾಗಿದ್ದ ನವೀನ್, ಖಾರ್ಕಿವ್ ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ಮೃತ ನವೀನ್ ಖಾರ್ಕಿವ್ ನಗರದಲ್ಲಿ ಊಟ ತರಲು ಬಂಕರ್‌ನಿಂದ ಹೊರ ಹೋಗಿ ಸೂಪರ್ ಮಾರ್ಕೆಟ್ ಬಳಿ ಕ್ಯೂನಲ್ಲಿ ನಿಂತಿದ್ದ ವೇಳೆ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದರು. ನವೀನ್ ಮೃತದೇಹ ಭಾರತಕ್ಕೆ ಕರೆ ತರುವಂತೆ ಕೇಂದ್ರ ಸರಕಾರವನ್ನು ಕಾಂಗ್ರೆಸ್ ಸಹಿತ ಹಲವು ಪಕ್ಷಗಳು ಒತ್ತಾಯಿಸಿದ್ದವು.

Join Whatsapp