ರಾಷ್ಟ್ರೀಯ ಐಕ್ಯತಾ ದಿನ: ಮಂಗಳೂರಿಗೆ ಆಗಮಿಸಿದ ಸೈಕಲ್ ಜಾಥಾ

Prasthutha|

ಮಂಗಳೂರು: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ವರ್ಷಾಚರಣೆ ಅಂಗವಾಗಿ ಇದೇ ಅಕ್ಟೋಬರ್ 31ರಂದು ಆಚರಿಸಲಾಗುವ ರಾಷ್ಟ್ರೀಯ ಐಕ್ಯತಾ ದಿನದ ಹಿನ್ನೆಲೆಯಲ್ಲಿ ಕೈಗಾರಿಕಾ ಭದ್ರತಾ ಪಡೆಯಿಂದ ಸೈಕಲ್ ಜಾಥಾ ಏರ್ಪಡಿಸಲಾಗಿದೆ.

- Advertisement -


ಗುಜರಾತ್ ವರೆಗೆ ಸಂಚರಿಸಲಿರುವ ಜಾಥಾಕ್ಕೆ ಈಗಾಗಲೇ ಕೇರಳದ ತಿರುವನಂತಪುರಂನಲ್ಲಿ ಚಾಲನೆ ದೊರೆತಿದ್ದು, ಇಂದು ಮಂಗಳೂರಿನ ನವಬಂದರಿಗೆ ಬುಧವಾರ ಆಗಮಿಸಿತು.ಈ ಸಂದರ್ಭದಲ್ಲಿ ಸೈಕಲ್ Rally ಯನ್ನು ಎನ್ಎಂಪಿಟಿಯ ಹಾಗೂ ಸಿಐಎಸ್ಎಫ಼್ ನ ಸಿಬ್ಬಂದಿ ಬರಮಾಡಿಕೊಂಡರು.


ಸಿಐಎಸ್ಎಫ಼್ ನ ಡೆಪ್ಯೂಟಿ ಕಮಾಂಡೆಂಟ್ ಅಶುತೋಷ್ ಗೌರ್, ಎನ್.ಎಮ್.ಪಿ.ಟಿ ಯ ಡೆಪ್ಯೂಟಿ ಕಮಾಂಡೆಂಟ್ ಬಿಕ್ರಮ್ ಸೇರಿದಂತೆ ಸಿಐಎಸ್ಎಫ಼್ ನ ಮತ್ತು ಎನ್.ಎಮ್.ಪಿ.ಟಿ ಯ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.

Join Whatsapp