ಸಾಗರದ ಈಡಿಗರ ಭವನದಲ್ಲಿ ನಾರಾಯಣ ಗುರು ಧಾರ್ಮಿಕ ಸಮಾವೇಶ 2022

Prasthutha|

- Advertisement -

ಶಿವಮೊಗ್ಗ: ಈಡಿಗ, ಬಿಲ್ಲವ ಇತ್ಯಾದಿ ನಮ್ಮ 26 ಒಳಪಂಗಡಗಳು ನಾರಾಯಣ ಗುರುಗಳ ತತ್ವದಡಿ ಒಗ್ಗೂಡಿ ಒಂದಾಗುವುದು, ಸರಕಾರದ ಸವಲತ್ತುಗಳನ್ನು ಪಡೆಯಲು ಶಿವಮೊಗ್ಗ ಜಿಲ್ಲೆಯ ಸಾಗರದ ಈಡಿಗರ ಭವನದಲ್ಲಿ ನಾರಾಯಣ ಗುರು ಧಾರ್ಮಿಕ ಸಮಾವೇಶವು ಜನವರಿ 9ರಂದು ನಡೆಯುತ್ತದೆ ಎಂದು ರಾಜ್ಯಾಧ್ಯಕ್ಷ ಸೈದಪ್ಪ ಗುತ್ತಿಗೆದಾರ್ ಹೇಳಿದರು.

ಸೋಮನಾಥ ಶಾಂತಿಯವರು ಮಾತನಾಡಿ ನಾರಾಯಣ ಗುರುಗಳ ಪರಂಪರೆಯನ್ನು ಕರ್ನಾಟಕದ ಮನೆ ಮನೆಗೆ ಮುಟ್ಟಿಸಲು ಈ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ತೆಗೆದುಕೊಂಡ ತೀರ್ಮಾನದಂತೆ , ಆ ನೀತಿಯಂತೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ನಾರಾಯಣ ಗುರು ಬ್ರಹ್ಮ ವಿದ್ಯಾಲಯ ಸ್ಥಾಪಿಸಲಾಗುವುದು ಎಂದೂ ಸೋಮನಾಥ ಶಾಂತಿ ಹೇಳಿದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆರ್ಯ, ರವಿ ಶಾಂತಿ, ನವೀನ್ ಚಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Join Whatsapp