ಮಂಗಳೂರಿನಲ್ಲಿ ಜೆಡಿಎಸ್ ನಿಂದ ನಾರಾಯಣ ಗುರು ವಾಹನ ಜಾಥಾ

Prasthutha|

ಮಂಗಳೂರು: ನಾರಾಯಣ ಗುರು ಸ್ತಬ್ದಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಮಂಗಳೂರಿನಲ್ಲಿಂದು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಯಿಂದ ನಾರಾಯಣ ಗುರು ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು.

- Advertisement -

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಗುರು ಯಾತ್ರೆಗೆ ಚಾಲನೆ ನೀಡಿದರು.

ಜೆಡಿಎಸ್ ಘಟಕದವರು ಸ್ಥಳೀಯ ನಾಯಕ ಅಕ್ಷಿತ್ ನಾಯಕತ್ವದಲ್ಲಿ ಗಡಿಯಾರ ಗೋಪುರದಿಂದ ಕುದ್ರೋಳಿ ಗೋಕರ್ಣನಾಥೇಶ್ವರ ಆಲಯದವರೆಗೆ ವಾಹನ ಜಾಥಾ ನಡೆಸಿದರು. ಜೆಡಿಎಸ್ನ ಹಲವು ನಾಯಕರು ನಡೆದೇ ಜಾಥಾದಲ್ಲಿ ಪಾಲ್ಗೊಂಡು ನಾರಾಯಣ ಗುರುಗೆ ಕೇಂದ್ರದ ಬಿಜೆಪಿ ನಾಯಕರು ಅವಮಾನ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Join Whatsapp