ಮಣಿಪಾಲ: ಎಂಐಸಿ ಕ್ಯಾಂಪಸ್ ನಲ್ಲಿ ‘ನಮ್ಮ ಅಂಗಡಿ-2022’ ಉದ್ಘಾಟನೆ

Prasthutha|

ಮಣಿಪಾಲ: ಮಣಿಪಾಲ ಇನ್ಸ್ಟಿಟ್ಯೂಶನ್ ಆಫ್ ಕಮ್ಯುನಿಕೇಶನ್ ಇದರ ಸ್ನಾತಕೋತ್ತರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ನಮ್ಮ ಅಂಗಡಿ 2022’ ಉದ್ಘಾಟನಾ ಕಾರ್ಯಕ್ರಮವು ಎಂಐಸಿ ಕ್ಯಾಂಪಸ್ ನಲ್ಲಿ ನಡೆಯಿತು.

- Advertisement -

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕಳೆದ 19 ವರುಷಗಳಿಂದ ‘ನಮ್ಮ ಭೂಮಿ’ ಸಂಸ್ಥೆಯ ಸಹಯೋಗದಲ್ಲಿ ಉದಾತ್ತ ಉದ್ದೇಶವನ್ನು ನಿರ್ವಹಿಸುತ್ತಾ ಬಂದಿರುವುದಕ್ಕಾಗಿ ಸಂಸ್ಥೆಯನ್ನು ಅವರು ಅಭಿನಂದಿಸಿದರು. “ಸಂವಹನ ವಿಭಾಗವು ಉಡುಪಿಯ ಸಂಸ್ಕೃತಿಯನ್ನು ಅನ್ವೇಷಿಸಲು ಹಾಗೂ ಅರಿವು ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕಿದೆ” ಎಂದರು.  

- Advertisement -

ಸಂಸ್ಥೆಯ ನಿರ್ದೇಶಕ ಡಾ.ಪದ್ಮಾ ರಾಣಿ ಮಾತನಾಡಿ, “ಕೋವಿಡ್ ಕಾರಣದಿಂದ ಕಳೆದ ಎರಡು ವರುಷಗಳಲ್ಲಿ ಆಫ್ ಲೈನ್ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು. ಈ ಮೂಲಕ ಸ್ಥಳೀಯ ಕುಶಲಕರ್ಮಿಗಳಿಗೆ ವೇದಿಕೆ ಕಲ್ಪಿಸಿದ್ದೆವು” ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಐಡಿಪಿ ಎಜ್ಯುಕೇಶನ್ ಇದರ ಬ್ಯುಸಿನೆಸ್ ಡೆವಲಪ್ಮೆಂಟ್ ನ ಹಿರಿಯ ಕಾರ್ಯನಿರ್ವಹಣಾಧಿಕಾರಿ ಶಿಜೋಮನ್ ಯೇಸುದಾಸ್, ಸೆಲ್ಕೋ ಸಂಸ್ಥೆ ಸಿಇಓ ಗುರುಪ್ರಕಾಶ್ ಶೆಟ್ಟಿ, ಕಾರ್ಯಕ್ರಮದ ಸಂಯೋಜಕಿ ಸೌಪರ್ಣಿಕಾ ಪವನ್ ಕುಮಾರ್ ಅತ್ತಾವರ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಷಣ್ಮುಖ ಅನಘ್ ಸ್ವಾಗತಿಸಿ, ಉರ್ಬಿ ಚಂದಾ ವಂದಿಸಿದರು.

Join Whatsapp