ಮೈಸೂರು: ಬಸ್ ಶೆಲ್ಟರ್ ಮೇಲಿದ್ದ ಗೋಪುರ ತೆರವು

Prasthutha|

- Advertisement -

ಮೈಸೂರು: ಬಸ್​​ ಶೆಲ್ಟರ್​​ ಮೇಲಿದ್ದ ಮೂರು ಗೋಪುರ ಗಳ ಪೈಕಿ 2 ಗೋಪುರಗಳನ್ನು ತೆರವು ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಹೇಳಿದ್ದಾರೆ.

ಮೈಸೂರಿನ ಜೆಎಸ್​ ಎಸ್​ ಕಾಲೇಜು ಬಳಿ ಇರುವ ಬಸ್ ಶೆಲ್ಟರ್​​​​​ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ. ಇದೇ ಮಾದರಿಯಲ್ಲಿ 12 ಬಸ್ ಶೆಲ್ಟರ್​​ ನಿರ್ಮಾಣ ಮಾಡಲಾಗುತ್ತೆ. ಅರಮನೆ ಮಾದರಿಯಲ್ಲಿ ಬಸ್​​ ಶೆಲ್ಟರ್​ ನಿರ್ಮಿಸುವ ಉದ್ದೇಶ ಇತ್ತು. ಇದಕ್ಕೆ ಅನವಶ್ಯಕವಾಗಿ ಧರ್ಮದ ಲೇಪನ ಮಾಡಿದ್ದು ನೋವಾಗಿದೆ. ಹಿರಿಯರ ಸಲಹೆ ಮೇರೆಗೆ, ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೂ ಅನ್ಯತಾ ಭಾವಿಸಬಾರದು ಎಂದು ಮಾಧ್ಯಮ ಪ್ರಕಟಣೆ ಮೂಲಕ ಶಾಸಕ ರಾಮದಾಸ್ ಜನತೆಗೆ ಮನವಿ ಮಾಡಿದ್ದಾರೆ.

Join Whatsapp