ಅಂಗಾಂಗ ದಾನಕ್ಕೆ ನಾನು ಸಹಿ ಹಾಕಿದ್ದೇನೆ, ನೀವೂ ಸಂಕಲ್ಪ ತೊಡಿ: ಮುಖ್ಯಮಂತ್ರಿ ಕರೆ

Prasthutha|

ಉಡುಪಿ: ಇಂದು ವಿಶ್ವ ಅಂಗಾಂಗ ದಾನ ದಿನವಾಗಿದ್ದು, ಅಂಗಾಂಗ ದಾನದಿಂದ ಸಾವಿರಾರು ಮಂದಿಯ ಜೀವ ಉಳಿಸಬಹುದು. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕಿದ್ದೇನೆ. ಅದೇ ರೀತಿ ಎಲ್ಲರೂ ಅಂಗಾಂಗ ದಾನಕ್ಕೆ ಮುಂದಾಗಬೇಕು. ಇಂದು ಈ ಕುರಿತು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

- Advertisement -


ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಅಂಗಾಂಗ ದಾನ ಮತ್ತು ಕಸಿ ತಂತ್ರಜ್ಞಾನ ಪ್ರಗತಿಯಾಗಿದೆ. ಕಿಡ್ನಿ ಸೇರಿದಂತೆ ಹಲವು ಅಂಗಾಂಗ ದಾನ ನಡೆಯುತ್ತಿವೆ. ಅಂಗಾಂಗ ದಾನದಿಂದ ಸಾವಿರಾರು ಜೀವಗಳನ್ನು ಉಳಿಸಬಹುದು. ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಮುಂದೆ ಬರಬೇಕು ಎಂದರು.


ಕೋವಿಡ್ ನಿಯಂತ್ರಣ ಮತ್ತು ಶಾಲೆ ಆರಂಭ ಕುರಿತು ತಜ್ಞರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

Join Whatsapp