ಗಾಂಜಾ ಸೇವಿಸಿ 6 ವರ್ಷದ ಬಾಲಕನ ಕೊಲೆ: ಶಿವ ದೇವರು ಬಲಿ ಕೇಳಿದ್ದಾನೆಂದ ಕೊಲೆಗಡುಕರು

Prasthutha|

ನವದೆಹಲಿ: ಇಬ್ಬರು ಹುಡುಗರು ಗಾಂಜಾ ಸೇವಿಸಿ ದೇವರು ಶಿವ ಬಲಿ ಕೇಳಿದ್ದಾನೆಂದು ಆರು ವರ್ಷದ ಬಾಲಕನನ್ನು ಚಾಕುವಿನಿಂದ ಕತ್ತು ಸೀಳಿ ಕೊಂದಿರುವ ಆಘಾತಕಾರಿ ಘಟನೆ ನವದೆಹಲಿಯ ಲೋಧಿ ರಸ್ತೆಯಲ್ಲಿ ನಡೆದಿದೆ.

- Advertisement -

ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ ಕೊಲೆಗೆ ಹುಡುಗರು ಬಳಸಿದ್ದ ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಲೋಧಿ ರಸ್ತೆಯ ಕಟ್ಟಡ ನಿರ್ಮಾಣ ಸೈಟ್^ನಲ್ಲಿ ಕೊಲೆಗೀಡಾದ ಬಾಲಕನ ಮೃತದೇಹ ಹಿಡಿದು ಪೋಷಕರು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ದಂಪತಿಗೆ ಮೂವರು ಮಕ್ಕಳಿದ್ದು, ಕೊಲೆಯಾದ ಬಾಲಕ ಎರಡನೇಯವನು. ಮೂರನೇ ಮಗುಗೆ ಎರಡು ವರ್ಷ ಪ್ರಾಯವಾಗಿದೆ.

- Advertisement -

ದಂಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ರಾತ್ರಿ ಊಟದ ನಂತರ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಭಜನೆ ಹಾಡುತ್ತಿದ್ದಾಗ ತಮ್ಮ ಮಗ ನಾಪತ್ತೆಯಾಗಿರುವುದು ಗೊತ್ತಾಗಿದೆ. ಸಮೀಪದ ಕೊಳೆಗೇರಿಗಳಲ್ಲಿ ಹುಡುಕಾಟ ನಡೆಸಿದಾಗ, ನೆಲದ ಮೇಲೆ ರಕ್ತ ಕಂಡಿರುವುದಾಗಿ ಬಾಲಕನ ತಂದೆ ಹೇಳಿದ್ದಾರೆ.

ಇಬ್ಬರು ಆರೋಪಿಗಳು ಭಗವಾನ್ ಶಿವನ ಪ್ರಸಾದವನ್ನು ಸೇವಿಸಿದ ನಂತರ, ಕೆಲವು ಮಹಿಳೆಯರು ಭಜನೆಗಳನ್ನು ಹಾಡುವ ಸ್ಥಳಕ್ಕೆ ಹೋಗಿ ಅಗರಬತ್ತಿಗಳನ್ನು ಕೇಳಿದರು, ಆದರೆ ಅವರು ಕೊಡಲು ನಿರಾಕರಿಸಿದರು. ಶಿವನು ಮಗುವಿನ ತ್ಯಾಗವನ್ನು ಕೇಳುತ್ತಿದ್ದಾನೆ ಎಂದು ಭಾವಿಸಿದರು. ನಂತರ ಮಗುವನ್ನು ಕರೆದೊಯ್ದು ಅಡುಗೆ ಚಾಕುವಿನಿಂದ ಕತ್ತು ಸೀಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp