ರಾಹುಲ್ ಪೋಸ್ಟರ್ ಗೆ ಶೂ ಎಸೆದು, ಮಸಿ ಬಳಿದ ಬಿಜೆಪಿ ಕಾರ್ಯಕರ್ತರು

Prasthutha|

ಮುಂಬೈ: ವಿಡಿ ಸಾವರ್ಕರ್ ಬ್ರಿಟಿಷರಿಗೆ ನೆರವಾಗಿದ್ದು, ಅದಕ್ಕಾಗಿ ಹಣ ಪಡೆಯುತ್ತಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಆಕ್ರೋಶಗೊಂಡ ಬಿಜೆಪಿಯ ಕಾರ್ಯಕರ್ತರು ರಾಗಾ ಪೋಸ್ಟರ್ ಗೆ ಮಸಿಬಳಿದು, ಶೂಗಳನ್ನೆಸೆದು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಸಾವರ್ಕರ್ ನನ್ನು ಅವಮಾನಿಸಿದಕ್ಕಾಗಿ ನಾವು ‘ ಜೂತಾ ಮಾರೋ ಆಂದೋಲನ್’ ನಡೆಸುತ್ತಿದ್ದೇವೆ ಎಂದು ಬಿಜೆಪಿ‌ ನಾಯಕ‌ ರಾಮ ಕದಮ್ ಹೇಳಿದರು. ರಾಹುಲ್ ಗಾಂಧಿ ಮಾಡಿದ ಟೀಕೆಗಳು ಅವಮಾನಕಾರಿ ಮತ್ತು ಆಘಾತಕಾರಿಯಾದಂತದ್ದು. ಅದು ಸ್ವೀಕಾರ್ಹವಲ್ಲ. ಆದ್ದರಿಂದ ರಾಹುಲ್ ಆ ಹೇಳಿಕೆಗೆ ಕ್ಷಮೆಯಾಚನೆ ಮಾಡಬೇಕು ಎಂದು ಹೇಳಿದರು.

ರಾಹುಲ್ ಹೇಳಿಕೆ ಬಗ್ಗೆ ಉದ್ಧವ್ ಠಾಕ್ರೆ ನಿಲುವೇನು? ಅವರ್ಯಾಕೆ ರಾಹುಲ್ ಹೇಳಿಕೆಯನ್ನು ವಿರೋಧಿಸುತ್ತಿಲ್ಲ. ಅವರು ಹಿಂದುತ್ವವನ್ನು ತೊರೆದಿದ್ದಾರೆ ಎಂದು ಕದಮ್ ಆರೋಪಿಸಿದರು.

- Advertisement -

ಕರ್ನಾಟಕ ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿ ವರ್ಷಗಟ್ಟಲೆ ಜೈಲುವಾಸ ಅನುಭವಿಸಿದ್ದಾರೆ. ಆದರೆ ಆರ್ರೆಸ್ಸೆಸ್ಸ್ ಆ ಸಮಯದಲ್ಲಿ ಬ್ರಿಟಿಷರಿಗೆ ನೆರವಾಗುತ್ತಿತ್ತು. ಸಾವರ್ಕರ್ ಆ ನೆರವಿಗಾಗಿ ಬ್ರಿಟಿಷರೊಂದಿಗೆ ಹಣವೂ ಪಡೆಯುತ್ತಿದ್ದರು ಎಂಬ ಹೇಳಿಕೆ ನೀಡಿದ್ದರು.



Join Whatsapp