ಅಬಕಾರಿ ಹೊರತುಪಡಿಸಿ ಯಾವ ಖಾತೆಯನ್ನಾದರೂ ನಿಭಾಯಿಸುವೆ : ಎಮ್.ಟಿ.ಬಿ ನಾಗರಾಜ್

Prasthutha|

ಬೆಂಗಳೂರು : ನೂತನ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಯಾಗಿ ಅಯ್ಕೆಯಾದ ಎಮ್.ಟಿ.ಬಿ ನಾಗರಾಜ್ ಅವರು ಅಕ್ರಮ ಗಣಿಗಾರಿಕೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು ಬ್ಲಾಸ್ಟಿಂಗ್ ಸೇರಿದಂತೆ ಅಕ್ರಮ ಗಣಿಗಾರಿಕೆಯ ಕುರಿತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

- Advertisement -

ಜಿಲ್ಲೆಯಲ್ಲಿ ಇಸ್ಪೀಟ್, ಕೋಳಿ ಅಂಕ, ಜೂಜಾಟ, ಗಾಂಜಾ, ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿರುವಾಗ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆಯೆಂದು ಅವರು ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣ ಅವರನ್ನು ಬೊಟ್ಟು ಮಾಡಿ ಹೇಳಿದರು. ಮಾತ್ರವಲ್ಲದೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಸರಗಳ್ಳತನಕ್ಕೆ ಬ್ರೇಕ್ ನೀಡುವಂತೆ ಅವರಿಗೆ ಸೂಚಿಸಿದರು.

ಸಭೆಯ ಬಳಿಯ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ನಾಗರಾಜ್, ಸರ್ಕಾರದಲ್ಲಿ ನಾನು ಖಾತೆಯ ಆಕಾಂಕ್ಷಿಯಲ್ಲ. ಸನ್ಯಾನ್ಯ ಮುಖ್ಯಮಂತ್ರಿ ಶ್ರೀ ಬೊಮ್ಮಾಯಿ ಅವರು ಅಬಕಾರಿ ಹೊರತುಪಡಿಸಿ ಯಾವ ಖಾತೆ ನೀಡಿದರೂ ಜನಪರವಾಗಿ ಕೆಲಸ ನಿರ್ವಹಿಸುತ್ತೇನೆಂದು ತಿಳಿಸಿದ್ದಾರೆ.

Join Whatsapp