ಸಂಸದ ಪ್ರತಾಪ್ ಸಿಂಹ ಕಾರು ಅಪಘಾತ !

Prasthutha|

ಚನ್ನಪಟ್ಟಣ: ಸಂಸದ ಪ್ರತಾಪ್ ಸಿಂಹ ಚಲಿಸುತ್ತಿದ್ದ ಕಾರು ಪಲ್ಟಿಯಾಗಿರುವ ಘಟನೆ ಚನ್ನಪಟ್ಟಣ ಮುದುಗೆರೆ ಬಳಿ ನಡೆದಿದ್ದು, ಪ್ರತಾಪ್ ಸಿಂಹ ಮತ್ತು ಚಾಲಕನಿಗೆ ಗಾಯಗಳಾಗಿವೆ ಎನ್ನಲಾಗಿದೆ.

- Advertisement -

ಸಂಸದರ ಪತ್ನಿ, ಮಗಳು ಸೇರಿ ಆರು ಮಂದಿ ಕಾರಿನಲ್ಲಿ ಇದ್ದರು ಎನ್ನಲಾಗಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಪ್ರತಾಪ್ ಸಿಂಹ, ಪತ್ನಿ, ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ರಾಮನಗರ ಜಿಲ್ಲೆಯ ಚನ್ನಪಟ್ಟನ ತಾಲೂಕಿನ ಮುದುಗೆರೆ ಬಳಿ ಘಟನೆ ನಡೆದಿದೆ.

ಕಾರು ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ‘ನನ್ನ ಕಾರು ಅಪಘಾತವಾಗಿಲ್ಲ. ಅಪಘಾತ ಸಂಭವಿಸುವ ವೇಳೆ ನಾನು ಹೋಟೆಲೊಂದರಲ್ಲಿ ಊಟ ಮಾಡುತ್ತಿದ್ದೆ. ನಂತರ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದೇನೆ. ಇದನ್ನೇ ಸ್ಥಳದಲ್ಲಿದ್ದ ಸಾರ್ವಜನಿಕರು ನನ್ನ ಕಾರು ಎಂದು ವದಂತಿ ಹಬ್ಬಿಸಿದ್ದಾರೆ ” ಎಂದು ಹೇಳಿದ್ದಾರೆ.

- Advertisement -

Join Whatsapp