ಭಾರೀ ಪ್ರಮಾಣದ ಅಗ್ನಿ ಅವಘಡದ ಪರಿಣಾಮ 700ಕ್ಕೂ ಹೆಚ್ಚು ಅಂಗಡಿಗಳು ಭಸ್ಮ : ಪಟಾಕಿ ಅವಾಂತರದ ಶಂಕೆ

Prasthutha|

ಇಟಾನಗರ: ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಮಾರುಕಟ್ಟೆಯೊಂದರಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿ ಸುತ್ತ ಮುತ್ತಲಿನ 700ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆಯೊಂದು ನಡೆದಿದೆ.

- Advertisement -

ಇಟಾನಗರದ ನಗರ್ಲಗುನ್ ಡೈಲಿ ಮಾರುಕಟ್ಟೆಯಲ್ಲಿ ಬೆಳಗ್ಗಿನ ಜಾವದಲ್ಲಿ ಅನಿರೀಕ್ಷಿತವಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ವ್ಯಾಪಕಗೊಂಡು 700ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮಗೊಂಡಿದೆ. ಆದರೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ದೀಪಾವಳಿಗೆ ಬಳಸುವ ಪಟಾಕಿ ಸಿಡಿ ಮದ್ದುಗಳು ಈ ಬೆಂಕಿ ಉದ್ಭವಗೊಳ್ಳಲು ಕಾರಣ ಎಂದು ಶಂಕಿಸಲಾಗುತ್ತಿದೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎನ್ನಲಾಗಿದೆ.

Join Whatsapp