ಮುಖ್ಯಮಂತ್ರಿ ಭೇಟಿಗೆ ಹೋಗುವ ಸಾರ್ವಜನಿಕರಿಗೆ ಮೊಬೈಲ್ ನಿಷೇಧ

Prasthutha|

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ಬರುವ ಸಾರ್ವಜನಿಕರು ಮೊಬೈಲ್ ಬಳಸುವಂತಿಲ್ಲ ಎಂದು ಬೊಮ್ಮಾಯಿ ಅವರ ಮನೆಯ ಹೊರಭಾಗದಲ್ಲಿ ಫಲಕ ಅಳವಡಿಸಲಾಗಿದೆ.

- Advertisement -


ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿವಾಸಕ್ಕೆ ಬರುವವರು ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಾರೆ. ಇದರಿಂದ ಸಿಎಂ ಅವರ ಬೇರೆ ಕೆಲಸಗಳಿಗೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಮೊಬೈಲ್ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.


ಈಗಾಗಲೇ ಸಿಎಂ ಗೃಹ ಕಚೇರಿ ಕೃಷ್ಣಾ ಪ್ರವೇಶಿಸುವವರು ಮುಖ್ಯದ್ವಾರದ ತಪಾಸಣಾ ಕೇಂದ್ರದಲ್ಲಿ ಮೊಬೈಲ್ ಕೊಟ್ಟು ಟೋಕನ್ ಪಡೆದು ಒಳಹೋಗುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಸಿಎಂ ಭೇಟಿ ಮುಗಿಸಿ ವಾಪಸ್ ತೆರಳುವಾಗ ಟೋಕನ್ ನೀಡಿ ತಮ್ಮ ಮೊಬೈಲ್ ವಾಪಸ್ ಪಡೆಯಬೇಕಿದೆ.

Join Whatsapp