ಕಂದಾಯ ಇಲಾಖೆಯಲ್ಲಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಎಂಎಲ್ ಸಿ ವೀಣಾಅಚ್ಚಯ್ಯ

Prasthutha|

ಮಡಿಕೇರಿ: ಕಂದಾಯ ಇಲಾಖೆಯಲ್ಲಿರುವ ಸಮಸ್ಯೆಗಳು ಹಾಗೂ ಬೆಳೆಗಾರರ ಅರ್ಜಿ ವಿಲೇವಾರಿಗೆ ಆಗುತ್ತಿರುವ ಅಡಚಣೆಗಳ ಕುರಿತು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರೊಂದಿಗೆ ಚರ್ಚಿಸಿದರು.

- Advertisement -

ಕೊಡಗಿನ ಜಮ್ಮಾ ಸಮಸ್ಯೆಯ ಕುರಿತು ಗಮನ ಸೆಳೆದರು. ಪೂಗ್ಗೇರ ಕುಟುಂಬಸ್ಥರು ಬೈತೂರು ದೇವಸ್ಥಾನಕ್ಕೆ ತೆರಳಲು ಅನುಮತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವೀಣಾಅಚ್ಚಯ್ಯ ಮನವಿ ಮಾಡಿದರು.

Join Whatsapp