ಮಾರಿಪಳ್ಳದಲ್ಲಿ ಅಮಾಯಕ ಬಾಲಕನ ಮೇಲೆ ಸಂಘಪರಿವಾರದ ಗೂಂಡಾಗಳಿಂದ ಹತ್ಯೆಗೆ ಯತ್ನ: PFI ಬಂಟ್ವಾಳ ತಾಲೂಕು ಸಮಿತಿಯಿಂದ ಖಂಡನೆ

Prasthutha|

ಇಂತಹ ಅನೇಕ ಪ್ರಕರಣಗಳು ಒಂದು ತಿಂಗಳಿನಿಂದ ಬಂಟ್ವಾಳ ತಾಲೂಕಿನಾದ್ಯಂತ ನಡೆಯುತ್ತಿದ್ದು ಪೊಲೀಸ್ ಇಲಾಖೆಯ ಮೌನವು ಹಲವಾರು ಸಂದೇಹಕ್ಕೆ ಎಡೆ ಮಾಡಿಕೊಡುತ್ತಿದೆ

- Advertisement -

ಬಂಟ್ವಾಳ: ಸಂಘಪರಿವಾರದ ಗೂಂಡಾಗಳು ಮತೊಮ್ಮೆ ಅಟ್ಟಹಾಸ ಮೆರೆದಿದ್ದು ಮಾರಿಪಳ್ಳ ಸಮೀಪ ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಸಂದರ್ಭ ಮಾರಿಪಳ್ಳ ಕಡೆಗೋಳಿ ಸಂಘಪರಿವಾರದ ಮೂರು ದುಷ್ಕರ್ಮಿಗಳು ಹಲ್ಲೆ ನಡೆಸಿ,ಕತ್ತನ್ನು ಹಿಸುಕಿ ಕೊಲೆಗೆ ಯತ್ನಿಸಿದ್ದು, ಬಾಲಕ ಬೊಬ್ಬೆ ಹಾಕಿದಾಗ ಸಾರ್ವಜನಿಕರನ್ನು ಕಂಡು ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಈ ಘಟನೆಯನ್ನು ಖಂಡಿಸುತ್ತದೆ.

ಬಂಟ್ವಾಳದ ಜನತೆ ಇದೀಗ ಶಾಂತಿಯುತವಾಗಿ ಜೀವಿಸುತಿದ್ದು ಸಂಘಪರಿವಾರ ಇದೀಗ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೀಘ್ರವೇ ಇದರ ಹಿಂದೆ ಇರುವ ಷಡ್ಯಂತ್ರವನ್ನು ಬಯಲಿಗೆ ಎಳೆದು ತಪ್ಪಿತಸ್ಥರನ್ನು ಶಿಕ್ಷಿಸದೆ ಇದ್ದರೆ ಇಂತಹ ಘಟನೆಗಳು ಮರುಕಳಿಸಿ ಜಿಲ್ಲೆಯ ಶಾಂತಿ ಕದಡುವ ಸಾಧ್ಯತೆ ಇದೆ.

- Advertisement -

ಸಮಾಜದ ಶಾಂತಿಯನ್ನು ಕದಡುವ ಇಂತಹ ಅನೇಕ ಪ್ರಕರಣಗಳು ಒಂದು ತಿಂಗಳಿನಿಂದ ಬಂಟ್ವಾಳ ತಾಲೂಕಿನದಾನಾದ್ಯಂತ ನಡೆಯುತ್ತಿದ್ದು ಪೊಲೀಸ್ ಇಲಾಖೆಯ ಮೌನವು ಹಲವಾರು ಸಂದೇಹಕ್ಕೆ ಎಡೆ ಮಾಡಿಕೊಡುತ್ತಿದೆ.ಈ ಇಂದೆ 5 ವರ್ಷಗಳ ಮೊದಲು ಇಂತದ್ದೇ ಕೆಲವು ಹಲ್ಲೆ ಮತ್ತು ಕೊಲೆ ಯತ್ನಗಳು ನಡೆದಾಗ ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ಬಂದಿಸದೆ ಅದರ ಹಿಂದೆ ಇರುವ ಷಡ್ಯಂತ್ರವನ್ನು ಬಯಲಿಗೆಯಲು ಕಾರ್ಯ ಪ್ರವರ್ತರಾಗದ ಕಾರಣ ಬಂಟ್ವಾಳ ತಾಲೂಕಿನ ಎರಡು ಜೀವಗಳು ಕಳೆದು ಕೊಳ್ಳಬೇಕಾಯಿತು.

ಇದೀಗ ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯಪ್ರವರ್ತರಾಗಿ ಇದರ ಹಿಂದೆ ಅಡಗಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಮತ್ತು ಬಂಟ್ವಾಳ ತಾಲೂಕಿನ ಶಾಂತಿಯನ್ನು ಕಾಪಾಡಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತಿದೆ.



Join Whatsapp