ಜೆಡಿಎಸ್ ನಲ್ಲಿ ಪಂಚರತ್ನಗಳು, ಬಿಜೆಪಿಯಲ್ಲಿ ಸೀಡಿ, ಕಮೀಷನ್ ರತ್ನಗಳು: ಸರಣಿ ಟ್ವೀಟ್ ಮೂಲಕ ಬಿಜೆಪಿ ಝಾಡಿಸಿದ ಹೆಚ್ಡಿಕೆ

Prasthutha|

ಬಿಜೆಪಿಯ ‘ಸುಖ ಸಿದ್ಧಾಂತ’ಕ್ಕೆ ರಣರೋಚಕ ಇತಿಹಾಸವಿದೆ

- Advertisement -

ಬೆಂಗಳೂರು: ಜೆಡಿಎಸ್ ಗುರಿಯಾಗಿಸಿ ‘ಮಿಷನ್ 123’ ಕುರಿತಾಗಿ ವ್ಯಂಗ್ಯವಾಡಿದ್ದ ಬಿಜೆಪಿ ಟ್ವೀಟ್ ಗೆ ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದಾರೆ.

ಸರಣಿ ಟ್ವೀಟ್ ಮೂಲಕ ಬಿಜೆಪಿ ಕುಟುಂಬ ರಾಜಕಾರಣದ ಇತಿಹಾಸವನ್ನು ಕೆದಕಿದ್ದಾರೆ. ಅಲ್ಲದೇ, ಬಿಜೆಪಿಯ ಸಿದ್ಧಾಂತವನ್ನು ‘ಸುಖ ಸಿದ್ಧಾಂತ’ ಎಂದು ಜರೆದಿದ್ದಾರೆ.

- Advertisement -

“ಜೆಡಿಎಸ್ ನ ‘ಜಲಧಾರೆ’ ಸಮಾವೇಶ ಸಮಾರೋಪಗೊಂಡ ಆರು ದಿನಗಳ ಬಳಿಕ ಅಧ್ಯಯನ ಮಾಡಿ ಬಿಜೆಪಿ ಟ್ವೀಟ್ ಮಾಡಿದೆ. ಇನ್ನೂ ಆರಂಭವಾಗದ ‘ಪಂಚರತ್ನ ಯಾತ್ರೆ’ ಬಗ್ಗೆ ಬಿಜೆಪಿಗೆ ಅದಾಗಲೇ ಬಿಪಿ ಏರಿದೆ” ಎಂದು ಟೀಕಿಸಿದ್ದಾರೆ.

“ಬಿಜೆಪಿಯಲ್ಲಿ ಕುಟುಂಬ ರಾಜಕಾರಣವು ಹನುಮಂತನ ಬಾಲದಂತಿದೆ. ಕುಟುಂಬ ರಾಜಕಾರಣದ ಶಿಶುಗಳೇ ತುಂಬಿಕೊಂಡಿವೆ. ಹೋದ ಕಡೆಯಲ್ಲೆಲ್ಲ ಸುಖವಾದದಲ್ಲಿ ತೇಲುವ ಬಿಜೆಪಿಯ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವಿದೆ” ಎಂದು ವ್ಯಂಗ್ಯವಾಡಿದ್ದಾರೆ.

“ಜೆಡಿಎಸ್ ನಲ್ಲಿ ಪಂಚರತ್ನಗಳು ಇರುವುದು ನಿಜ. ಆದರೆ, ಬಿಜೆಪಿಯಲ್ಲಿ ಸೀಡಿ ರತ್ನಗಳು, ಕಮೀಷನ್ ರತ್ನಗಳು, ಲೂಟಿ ರತ್ನಗಳು, ಸದನದಲ್ಲಿ ನೀಲಿಚಿತ್ರ ನೋಡಿದ ರತ್ನಗಳು ಇದ್ದಾವೆ” ಎಂದು ಕಾಲೆಳೆದಿದ್ದಾರೆ.

ಅಲ್ಲದೇ, ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಕುಟುಂಬ ರಾಜಕಾರಣದ ಕೊಳದಲ್ಲಿ ಮಿಂದೇಳುತ್ತಿದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.   

Join Whatsapp