ಮೆಸ್ಕಾಂ ನೂತನ ಎಂ.ಡಿ. ಮಂಜಪ್ಪಗೆ ಸನ್ಮಾನ: ವಿದ್ಯುತ್ ಸಮಸ್ಯೆ ಪರಿಹಾರದ ಭರವಸೆ

Prasthutha|

ಮಂಗಳೂರು: ದ.ಕ. ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ವತಿಯಿಂದ ನೂತನವಾಗಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮಂಜಪ್ಪರವರನ್ನು ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಗುತ್ತಿಗೆದಾರರ ರಾಜ್ಯ ಉಪಾಧ್ಯಕ್ಷ ಉರ್ಬನ್ ಪಿಂಟೊ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿದರು.

- Advertisement -


ಈ ವೇಳೆ ಮಾತನಾಡಿದ ಪಿಂಟೋ, ಇಡೀ ಜಿಲ್ಲೆಯ ಜನಸಾಮಾನ್ಯರಿಗೆ ಹಾಗೂ ವಿದ್ಯುತ್ ಗುತ್ತಿಗೆದಾರರಿಗೆ ತಮ್ಮ ಆಗಮನ ಬಹಳ ಸಂತೋಷ ತಂದಿದೆ. ತಮ್ಮಿಂದ ಇಡೀ ಮೆಸ್ಕಾಂಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.


ಜಿಲ್ಲಾಧ್ಯಕ್ಷರಾದ ಕುಶಾಲ್ ಪೂಜಾರಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳನ್ನು ಶ್ರೀಘ್ರ ಪರಿಹರಿಸಲು ವಿನಂತಿಸಿದರು.

- Advertisement -


ಪ್ರಧಾನ ಕಾರ್ಯದರ್ಶಿ ಸುಶೀಲ್ ನೊರೊನ್ಹಾ ಮಾತನಾಡಿ, ಈ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಆಗಿ ಸೇವೆಗೆ ಸೇರಿ ಎಲ್ಲಾ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ಇದೀಗ ಅತ್ಯುನ್ನತ ಹುದ್ದೆ ಅಲಂಕರಿಸಿದ ಈ ಜಿಲ್ಲೆಯ ಸುಪುತ್ರ ಇತಿಹಾಸ ನಿರ್ಮಿಸಿದ್ದಾರೆ ಎಂದು ಹೇಳಿದರು.
ಎಂ. ಡಿ. ಮಂಜಪ್ಪ ಮಾತನಾಡಿ, ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಜಿಲ್ಲಾ ಉಪಾಧ್ಯಕ್ಷರಾದ ರವಿ ಪ್ರಸಾದ್ ಶೆಟ್ಟಿ,ಲಕ್ಶಿನಾರಾಯಣ ಅಡಂತ್ಯಾಯ, ಮೆಸ್ಕಾಂ ಪ್ರತಿನಿಧಿ ಬಾಲಕೃಷ್ಣ ಸೆರ್ಕಳ, ಪ್ರವೀಣ್ ಸುವರ್ಣ, ರವಿ ಸುವರ್ಣ, ಪುರುಷೋತ್ತಮ್, ಯೂಸುಫ್, ಸುಬ್ರಹ್ಮಣ್ಯ ಭಟ್ ವಿವೇಕಾನಂದ, ನವೀನ್, ಸುಂದರ ಗೌಡ, ಪದ್ಮನಾಭ, ಗೋಪಾಲ, ರಘುಪತಿ, ಪ್ರಸನ್ನ, ಶಶೀಂದ್ರ ಅಮೀನ್, ಸೂರ್ಯನಾಥ ಆಳ್ವ ಯಶೋಧರ ಮತ್ತಿತರು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Join Whatsapp