ಸೋನಿಯಾ ಗಾಂಧಿ ಜನ್ಮ ದಿನ: ಯುವ ಕಾಂಗ್ರೆಸ್ ನಿಂದ ಗರ್ಭೀಣಿಯರಿಗೆ ಸಾಮೂಹಿಕ ಸೀಮಂತ

Prasthutha|

ಬೆಂಗಳೂರು: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಬಾಣಸವಾಡಿಯಲ್ಲಿ ಗರ್ಭೀಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಿತ್ತು.

- Advertisement -


ನಗರದ ಸರ್ವಜ್ಞ ನಗರದ ಬಾಣಸವಾಡಿ ವಾರ್ಡ್ ನ 70 ಕ್ಕೂ ಅಧಿಕ ಗರ್ಭೀಣಿಯರಿಗೆ ಮಾಜಿ ಗೃಹ ಸಚಿವ, ಶಾಸಕ ಕೆ.ಜೆ.ಜಾರ್ಜ್, ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಅವರು ಬಾಗೀನ ನೀಡಿ ಗೌರವಿಸಿದರು.

- Advertisement -


ದೊಡ್ಡ ಬಾಣಸವಾಡಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ತಾಯ್ತನದ ನಿರೀಕ್ಷೆಯಲ್ಲಿರುವ ಗರ್ಭೀಣಿಯರು ರೇಷ್ಮೆ ಸೀರೆ ಉಟ್ಟಿದ್ದರು. ಪ್ರತಿಯೊಬ್ಬರೂ ಹೂ ಮುಡಿದು ಭಾರತೀಯ ಸಂಪ್ರದಾಯದ ಪ್ರತೀಕವಾಗಿ ಕಂಗೊಳಿಸಿದರು. ನೆರೆ ಹೊರೆ, ಸ್ನೇಹಿತೆಯರ ಜತೆ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ಜವಾಹರ್ ಬಾಲಭವನದ ಅಧ್ಯಕ್ಷ ಜೆ. ಸಿರಿಲ್ ಪ್ರಭು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘು ದೇವರಾಜ್ ಮತ್ತಿತರ ಯುವ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Join Whatsapp