ಕೇರಳದಲ್ಲಿ ‘ಅಂಕ ಜಿಹಾದ್’ ನಡೆಯುತ್ತಿದೆ: ದೆಹಲಿ ವಿ.ವಿ ಪ್ರಾಧ್ಯಾಪಕನಿಂದ ವಿವಾದಾತ್ಮಕ ಹೇಳಿಕೆ

Prasthutha|

ಹೊಸದಿಲ್ಲಿ: ದೆಹಲಿಯ ಕಿರೋರಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ರಾಕೇಶ್ ಕುಮಾರ್ ಪಾಂಡೆ ಕೇರಳದಲ್ಲಿ ‘ಅಂಕ ಜಿಹಾದ್’ ನಡೆಯುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ಅವರು ಆರ್‌ಎಸ್‌ಎಸ್ ಬೆಂಬಲಿತ ಶಿಕ್ಷಕರ ಸಂಘಟನೆಯಾದ ನ್ಯಾಷನಲ್ ಡೆಮಾಕ್ರಟಿಕ್ ಟೀಚರ್ಸ್ ಫ್ರಂಟ್ ನ ಮಾಜಿ ಅಧ್ಯಕ್ಷರಾದ ಅವರು, ಕೇರಳದಲ್ಲಿ ಲವ್ ಜಿಹಾದ್ ಇರುವಂತೆ ‘ಅಂಕ ಜಿಹಾದ್’ ಕೂಡ ಇದೆ. ಅನೇಕ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರವೇಶ ಪಡೆಯಲು ಕಾರಣ ಒಂದು ದೊಡ್ಡ ಸಮುದಾಯದ ಸಂಚು ಎಂದು ‘ಕೇರಳದಲ್ಲಿ ಅಂಕ ಜಿಹಾದ್’ ಎಂಬ ಶೀರ್ಷಿಕೆಯ ಫೇಸ್‌ಬುಕ್ ಪೋಸ್ಟ್‌ನಲ್ಲಿ ರಾಕೇಶ್ ಕುಮಾರ್ ಪಾಂಡೆ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕೆಲವು ಸಂಘಟನೆಗಳು ವಿವಾದಾತ್ಮಕ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Join Whatsapp