ಮಂಗಳೂರು | ಅಗತ್ಯ ಸಾಮಗ್ರಿ ಖರೀದಿಗೆ ವಾಹನ ಬಳಸಬಹುದು : ಕಮಿಷನರ್ ಸ್ಪಷ್ಟನೆ

Prasthutha|

ಮಂಗಳೂರು: ಬೆಳಿಗ್ಗೆ 6ಗಂಟೆಯಿಂದ 9ಗಂಟೆಯವರೆಗೆ ಅಗತ್ಯವಿದ್ದರೆ ವಾಹನ ಬಳಸಬಹುದು ಎಂದು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಈ ಮೂಲಕ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ವಾಹನ ಬಳಸುವ ಬಗ್ಗೆ ಸಾರ್ವಜನಿಕರ ನಡುವೆ ಇದ್ದ ಗೊಂದಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ.

- Advertisement -

ಬೆಳಿಗ್ಗೆ 6ರಿಂದ 9 ಗಂಟೆ ತನಕ ಅಗತ್ಯವಿದ್ದರೆ ವಾಹನ ಬಳಸಬಹುದಾಗಿದೆ. ಅದಷ್ಟು ತಮ್ಮ ಮನೆಯ ಬಳಿಯ ಅಂಗಡಿ ಮುಗ್ಗಟ್ಟುಗಳಲ್ಲಿ ಸಾಮಾನು ಖರೀದಿಸುವಂತೆ ಕಮಿಷನರ್ ವಿನಂತಿಸಿದ್ದಾರೆ.

ಖಾಸಗಿ ಕಂಪೆನಿಯ ಉದ್ಯೋಗಿಗಳು ವಾಹನದಲ್ಲಿ ತೆರಳಬೇಕಾದರೆ ಗುರುತು ಚೀಟಿ ತೋರಿಸಬೇಕು ಎಂದು ಅವರು ತಿಳಿಸಿದ್ದಾರೆ.

Join Whatsapp