ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ: ಜೆಡಿಎಸ್ ನಾಯಕಿ ಸುಮತಿ ಹೆಗ್ಡೆ ಅವರಿಂದ ನಾಮಪತ್ರ ಸಲ್ಲಿಕೆ

Prasthutha|

ಮಂಗಳೂರು: ಮಂಗಳೂರು ದಕ್ಷಿಣ ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆ ಅವರು ಗುರುವಾರ ಮಂಗಳೂರಿನ ಪಿ ವಿ ಎಸ್ ಸರ್ಕಲ್ , ಕೊಡಿಯಾಲ್ ಬೈಲ್ ನಿಂದ ಕಾಲ್ನಡಿಗೆ ಜಾಥಾ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

- Advertisement -


ಕುಡ್ಲದ ಸಾಂಸ್ಕೃತಿಕ ಕಲೆಯಾದ ಹುಲಿ ವೇಷವು ನೋಡುಗರ ಮನಸೆಳೆಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕನಸಿನ ಯೋಜನೆ, ಜೆಡಿಎಸ್ ಪಕ್ಷದ ಜನಪರ ಕಾರ್ಯಕ್ರಮಗಳನ್ನು ಸಾರುವ ಪ್ರಮುಖ ಐದು ಅಂಶದ ಕಾರ್ಯಕ್ರಮಗಳಾದ ಪಂಚರತ್ನ ಯೋಜನೆ ಇದರ ವಾಹನ ಜಾಥಾವು ಕಾಲ್ನಡಿಗೆ ಜಾಥಾವನ್ನು ಇನ್ನಷ್ಟು ಮೆರುಗುಗೊಳಿಸಿತು.

Join Whatsapp