ಮಂಗಳೂರಿನಲ್ಲಿ ಅನೈತಿಕ ಗೂಂಡಾಗಿರಿ : ನಾಲ್ವರನ್ನು ಅಧಿಕೃತವಾಗಿ ಬಂಧಿಸಿದ ಪೊಲೀಸರು

Prasthutha|

►ಬಸ್ಸಿನ ಚಾಲಕ – ನಿರ್ವಾಹಕನೂ ಪ್ರಕರಣದಲ್ಲಿ ಭಾಗಿ !

- Advertisement -

ನಿನ್ನೆ ಮಂಗಳೂರಿನ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದ್ದ ಸಂಘಪರಿವಾರದ ಅನೈತಿಕ ಗೂಂಡಾಗಿರಿಗೆ ಸಂಬಂಧಪಟ್ಟಂತೆ ಪಾಂಡೇಶ್ವರ  ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬಂಧಿತರಲ್ಲಿ ಬಸ್ಸಿನ ಚಾಲಕ ಮತ್ತು ನಿರ್ವಾಹಕನೂ ಸೇರಿದ್ದಾನೆ.  ಬಂಧಿತರನ್ನು ಪ್ರಕಾಶ್, ರಾಘವೇಂದ್ರ, ರಂಜಿತ್ ಮತ್ತು ಪವನ್ ಎಂದು ಗುರುತಿಸಲಾಗಿದೆ.

ಮಂಗಳೂರು – ಉಡುಪಿ ಮಧ್ಯೆ ಸಂಚರಿಸುವ ಖಾಸಗಿ ಬಸ್ ನಲ್ಲಿ ಕುಳಿತಿದ್ದ ಭಿನ್ನ ಕೋಮಿನ ಜೋಡಿಗಳನ್ನು ಪ್ರಶ್ನಿಸಿ ಈ ಆರೋಪಿಗಳು ಹಲ್ಲೆ ನಡೆಸಿದ್ದರು. ಯುವಕ ಶಿವಮೊಗ್ಗ ಮೂಲದವನಾದರೆ, ಯುವತಿ ಉಡುಪಿ ಮೂಲದವಳು ಎಂದು ತಿಳಿದು ಬಂದಿತ್ತು. ಯುವಕನ ಐಡಿ ಕಾರ್ಡ್ ತೋರಿಸುವಂತೆ ಬಲವಂತಪಡಿಸಿ ಹಲ್ಲೆ ನಡೆಸುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

- Advertisement -

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp