ಮಂಡ್ಯ: ರಸ್ತೆಗುಂಡಿಗೆ ನಿವೃತ್ತ ಯೋಧ ಬಲಿ

Prasthutha|

ಮಂಡ್ಯ: ನಿವೃತ್ತ ಯೋಧರೊಬ್ಬರು ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಉರುಳಿ ಕೆಳಕ್ಕೆ ಬಿದ್ದು, ಲಾರಿ ಹರಿದು ಮೃತ ಪಟ್ಟ ದಾರುಣ ಘಟನೆಯೊಂದು ಮಂಡ್ಯದ ಕಾರೆಮನೆ ಗೇಟ್ ಬಳಿ ನಡೆದಿದೆ.

- Advertisement -

ಭಾರತೀಯ ಸೇನೆಯ ನಿವೃತ್ತ ಯೋಧರಾಗಿರುವ ಎಸ್ ಎನ್ ಕುಮಾರ್ (39) ಅಪಘಾತ ಸಂಭವಿಸಿ ಮೃತಪಟ್ಟ ವ್ಯಕ್ತಿ. ತಂದೆಯನ್ನು ಕುಳ್ಳಿರಿಸಿ ಬೈಕ್ ನಲ್ಲಿ ಸಂಚರಿಸುತ್ತಿರುವಾಗ ಈ ಘಟನೆ ನಡೆದಿದೆ.

ದೊಡ್ಡ ಗುಂಡಿಯನ್ನು ತಪ್ಪಿಸುವ ಭರದಲ್ಲಿ ಕುಮಾರ್‌ ಎಡಕ್ಕೆ ಬೈಕ್‌ ತಿರುಗಿಸಿದಾಗ ಮುಂದಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿ ಕೆಳಕ್ಕೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಅವರ ತಲೆಯ ಮೇಲೆ ಹರಿದಿದೆ. ಅವರು ಹೆಲ್ಮೆಟ್‌ ಧರಿಸಿದ್ದರೂ ಅದು ಛಿದ್ರಗೊಂಡು ಮಿದುಳು ಹೊರಕ್ಕೆ ಬಂದಿದೆ.

- Advertisement -

ಅಪಘಾತದ ತೀವ್ರತೆಯ ಪರಿಣಾಮ ಕುಮಾರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಂದೆ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Join Whatsapp