ಕೋವಿಡ್ ಬದಲು ರೇಬಿಸ್ ಲಸಿಕೆ ಚುಚ್ಚಿದ ನರ್ಸ್ । ಆಸ್ಪತ್ರೆ ಸಿಬ್ಬಂದಿ ಅಮಾನತು

Prasthutha|

ಪುಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿಯಿಂದ ಅಚಾತುರ್ಯ ಘಟನೆಯೊಂದು ನಡೆದಿದ್ದು, ನರ್ಸ್ ವೊಬ್ಬರು ವ್ಯಕ್ತಿಗೆ ಕೋವಿಡ್ ಬದಲು ರೇಬಿಸ್ ಚುಚ್ಚುಮದ್ದು ನೀಡಿದ್ದಾರೆ. ಅಚಾತುರ್ಯವೆಸಗಿದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

- Advertisement -

ಕೋವಿಡ್ ಲಸಿಕೆ ಹಾಕಿಸುವ ಸಲುವಾಗಿ ಸ್ಥಳೀಯ ನಿವಾಸಿ ರಾಜ್ ಕುಮಾರ್ ಯಾದವ್ ಎಂಬವರು ಕಲ್ವಾ ಎಂಬಲ್ಲಿನ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಈ ಮಧ್ಯೆ ಕೋವಿಡ್ ಲಸಿಕೆ ಬದಲು ರೇಬಿಸ್ ಚುಚ್ಚುಮದ್ದನ್ನು ವೈದ್ಯರು ನೀಡಿದ್ದಾರೆ ಎಂದು ರಾಜ್ ಕುಮಾರ್ ಆರೋಪಿಸಿದ್ದಾರೆ. ಇವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಠಾಣೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಂತ್ರಸ್ತ ವ್ಯಕ್ತಿ ಕೋವಿಡ್ ಲಸಿಕೆ ಸಾಲನ್ನು ತಪ್ಪಿಸಿ ರೇಬಿಸ್ ಸಾಲಿನಲ್ಲಿ ನಿಂತಿರುವುದರಿಂದ ಈ ಸಮಸ್ಯೆವುಂಟಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

- Advertisement -

ಪ್ರಸಕ್ತ ಘಟನೆಯಿಂದ ವ್ಯಕ್ತಿಗೆ ಯಾವುದೇ ತೊಂದರೆಯಾಗಿಲ್ಲ. ಮಾತ್ರವಲ್ಲ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ವೈದ್ಯಕೀಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

Join Whatsapp