ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ; ಮನನೊಂದ ವೃದ್ಧೆ ಆತ್ಮಹತ್ಯೆ

Prasthutha|

ಹಾಸನ: ಊಟ ತಿಂಡಿ ನೀಡದೆ ಮನೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ ಕಾರಣ ಮನನೊಂದ ವೃದ್ಧೆ ಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ಹಳೇಬೀಡಿನಲ್ಲಿ ನಡೆದಿದೆ.

- Advertisement -


ಕಮಲಮ್ಮ(75) ಮೃತ ದುರ್ದೈವಿ. ಕಮಲಮ್ಮ ಅವರು ಹಳೇಬೀಡಿನ ದ್ವಾರಸಮುದ್ರ ಕೆರೆಗೆ ಹಾರಿ ನೀರಿನಲ್ಲಿ ಮುಳುಗಿ ಕೈಕಾಲು ಬಡಿದುಕೊಳ್ಳುತ್ತಿದ್ದಾಗ ಸ್ಥಳೀಯರು ಮೇಲಕ್ಕೆತ್ತಿ ರಕ್ಷಿಸುವ ಪ್ರಯತ್ನ ಮಾಡಿದರೂ ಮೃತಪಟ್ಟಿದ್ದಾರೆ.

ವೃದ್ಧೆಯ ಎದೆಯ ಭಾಗದಲ್ಲಿ ದೊರೆತ ಪರ್ಸ್ ನಲ್ಲಿ ವಿಳಾಸದ ಕುರಿತು ಮಾಹಿತಿ ದೊರೆಯಬಹುದು ಎಂದು ಪರ್ಸ್ ತೆರೆದಾಗ ಒಂದು ಚೀಟಿ ದೊರೆತಿದ್ದು, ಪ್ರತಿಭಾ ಹಾಗೂ ಮಂಜು ಎಂಬುವರು ಮನೆಯ ಒಳಗೆ ಕೂಡಿ ಹಾಕಿ, ಊಟಕೊಡದೇ ತೊಂದರೆ ಕೊಡುತ್ತಾರೆ, ನನ್ನ ಸಾವಿಗೆ ಅವರೇ ಕಾರಣ ಎಂದು ಬರೆದಿರುವುದು ತಿಳಿದು ಬಂದಿದೆ.

- Advertisement -


ಊಟಕೊಡದೇ ಮನೆಯೊಳಗೆ ಕೂಡಿಹಾಕಿ ತೊಂದರೆ ಕೊಟ್ಟಿದ್ದರಿಂದ ಮನನೊಂದು ಕೆರೆಯಲ್ಲಿ ಮುಳುಗಿ ಸಾಯುತ್ತಿದ್ದೇನೆ ಎಂದು ವೃದ್ದೆಯೇ ಬರೆದಿದ್ದಾರೆ ಎನ್ನಲಾಗಿದ್ದು ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Join Whatsapp