ಹಿಮಾಚಲ ಪ್ರದೇಶದಲ್ಲಿ ಭೂ ಕುಸಿತ: 9 ಮಂದಿ ಪ್ರವಾಸಿಗರು ಸಾವು

Prasthutha|

ಶಿಮ್ಲಾ ಜು.26: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಗುಡ್ಡದಿಂದ ದೊಡ್ಡ ಬಂಡೆಯೊಂದು ಕುಸಿತ ಪರಿಣಾಮ ಒಂಭತ್ತು ಮಂದಿ ಪ್ರವಾಸಿಗರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವುದು ಘಟನೆ ನಡೆದಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ವೀಡಿಯೋದಂತೆ ದೊಡ್ಡ ದೊಡ್ದ ಬಂಡೆಗಳು ಕಣಿವೆಗೆ ಹಾಗೂ ಅಲ್ಲಿಯ ಸೇತುವೆಯ ಮೇಲೆ ಜಾರಿ ಬಿದ್ದು ಎಲ್ಲವನ್ನೂ ಪುಡಿ ಮಾಡಿದವು.

- Advertisement -


ಇದು ಹೃದಯ ವಿದ್ರಾವಕ ಘಟನೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಂ ಠಾಕೂರ್ ತಿಳಿಸಿದ್ದಾರೆ. ಪ್ರವಾಸಿಗರು ದೆಹಲಿಯಿಂದ ಚಿತ್ಕುಲ್ ಕಣಿವೆ ನೋಡಲು ಬಂದಿದ್ದರು.

Join Whatsapp